<p><strong>ನವದೆಹಲಿ: </strong>ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 67,708 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಂದೇ ದಿನ 680 ಸೋಂಕಿತರು ಮೃತಪಟ್ಟಿದ್ದಾರೆ.</p>.<p>ದೇಶದ ಒಟ್ಟು ಸೋಂಕಿತರರ ಸಂಖ್ಯೆ 73,07,098ಕ್ಕೆ ಏರಿಕೆಯಾಗಿದ್ದು 63,83,442 ಕೋವಿಡ್ ಸೋಂಕು ಪೀಡಿತರು ಗುಣಮುಖರಾಗಿದ್ದಾರೆ. ಒಟ್ಟಾರೆ 8,26,876 ಸೋಂಕಿತರು ದೇಶದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ವರೆಗೂ ಕೋವಿಡ್ನಿಂದ 1,11,266 ಜನರು ಮೃತಪಟ್ಟಿದ್ದಾರೆ.</p>.<p>ಅಕ್ಟೋಬರ್ 14ರವರೆಗೆ ಒಟ್ಟು9,12,26,305 ಸ್ಯಾಂಪಲ್ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬುಧವಾರ (ಅ.14) ಒಂದೇ ದಿನ 11,36,183 ಸ್ಯಾಂಪಲ್ಗಳನ್ನು ತಪಾಸಣೆ ಮಾಡಲಾಗಿದೆ.</p>.<p>2021ರ ಜೂನ್ ಅಥವಾ ಜುಲೈ ವೇಳೆಗೆ 40ರಿಂದ 50 ಕೋಟಿಯಷ್ಟು ಲಸಿಕೆ ವಿತರಣೆ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಈಗಾಗಲೇ ಲಸಿಕೆ ತಯಾರಿಕೆಯ ಬ್ಲೂಪ್ರಿಂಟ್ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.</p>.<p>ಲಸಿಕೆ ವಿತರಣೆ ಕುರಿತಂತೆ ವೈದ್ಯರು ಮತ್ತು ಸಚಿವರ ತಂಡ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಅಂತಿಮ ರೂಪರೇಷೆಯನ್ನು ಸಿದ್ಧ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 67,708 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಂದೇ ದಿನ 680 ಸೋಂಕಿತರು ಮೃತಪಟ್ಟಿದ್ದಾರೆ.</p>.<p>ದೇಶದ ಒಟ್ಟು ಸೋಂಕಿತರರ ಸಂಖ್ಯೆ 73,07,098ಕ್ಕೆ ಏರಿಕೆಯಾಗಿದ್ದು 63,83,442 ಕೋವಿಡ್ ಸೋಂಕು ಪೀಡಿತರು ಗುಣಮುಖರಾಗಿದ್ದಾರೆ. ಒಟ್ಟಾರೆ 8,26,876 ಸೋಂಕಿತರು ದೇಶದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ವರೆಗೂ ಕೋವಿಡ್ನಿಂದ 1,11,266 ಜನರು ಮೃತಪಟ್ಟಿದ್ದಾರೆ.</p>.<p>ಅಕ್ಟೋಬರ್ 14ರವರೆಗೆ ಒಟ್ಟು9,12,26,305 ಸ್ಯಾಂಪಲ್ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಬುಧವಾರ (ಅ.14) ಒಂದೇ ದಿನ 11,36,183 ಸ್ಯಾಂಪಲ್ಗಳನ್ನು ತಪಾಸಣೆ ಮಾಡಲಾಗಿದೆ.</p>.<p>2021ರ ಜೂನ್ ಅಥವಾ ಜುಲೈ ವೇಳೆಗೆ 40ರಿಂದ 50 ಕೋಟಿಯಷ್ಟು ಲಸಿಕೆ ವಿತರಣೆ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಈಗಾಗಲೇ ಲಸಿಕೆ ತಯಾರಿಕೆಯ ಬ್ಲೂಪ್ರಿಂಟ್ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.</p>.<p>ಲಸಿಕೆ ವಿತರಣೆ ಕುರಿತಂತೆ ವೈದ್ಯರು ಮತ್ತು ಸಚಿವರ ತಂಡ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಅಂತಿಮ ರೂಪರೇಷೆಯನ್ನು ಸಿದ್ಧ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>