ವಿನಯ್ ಕುಮಾರ್ ಮಂಗಲ್(45) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. 2016ರಲ್ಲಿ ಝಾಲ್ವಾರ್ ಎಂಬಲ್ಲಿ ಮಂಗಲ್ ಅವರು ತೆರಿಗೆದಾರರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಭ್ರಷ್ಟಾಚಾರ ಆರೋಪದ ಅಡಿ ಶುಕ್ರವಾರ ಜೈಪುರದ ನ್ಯಾಯಾಲಯ ಇವರಿಗೆ ಐದು ವರ್ಷಗಳ ಜೈಲುವಾಸ ಶಿಕ್ಷೆ ವಿಧಿಸಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.