ಮುಂಬೈ: ಐಷಾರಾಮಿ ಕ್ರೂಸ್ ಡ್ರಗ್ಸ್ ಪ್ರಕರಣದ ಸಾಕ್ಷಿದಾರ ಪ್ರಭಾಕರ್ ಸೈಲ್ ಮಂಗಳವಾರವೂ ಮಾದಕ ವಸ್ತು ನಿಯಂತ್ರಣ ಸಂಸ್ಥೆಯ(ಎನ್ಸಿಬಿ) ದೆಹಲಿ ವಲಯದ ವಿಚಕ್ಷಣದಳದ ಎದುರು ವಿಚಾರಣೆಗೆ ಹಾಜರಾದರು.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವ ದೆಹಲಿ ವಲಯದ ಎನ್ಸಿಬಿ ವಿಚಕ್ಷಣಾ ದಳದ ಅಧಿಕಾರಿಗಳು, ಸಾಕ್ಷಿದಾರರ ವಿಚಾರಣೆ ನಡೆಸುತ್ತಿದ್ದಾರೆ.
ಎನ್ಸಿಬಿ (ಉತ್ತರ ವಲಯ) ಉಪ ಮಹಾನಿರ್ದೇಶಕ ಗ್ಯಾನೇಶ್ವರ್ ಸಿಂಗ್ ನೇತೃತ್ವದ ದೆಹಲಿಯ ಎನ್ಸಿಬಿ ವಿಚಕ್ಷಣಾ ದಳ ಸೋಮವಾರ ಪ್ರಭಾಕರ್ ಅವರನ್ನು ಹತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.