<p><strong>ಮುಂಬೈ:</strong> ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಮುಂಬೈ ಕರಾವಳಿಯಲ್ಲಿ ಮುಲುಗಿದ ಪಿ–305 ಬಾರ್ಜ್ನಲ್ಲಿದ್ದ 22 ಮಂದಿ ಮೃತಪಟ್ಟಿದ್ದು, 53 ಮಂದಿಯ ಸುಳಿವು ಸಿಕ್ಕಿಲ್ಲ. 22 ಸಿಬ್ಬಂದಿಯ ಮೃತದೇಹಗಳನ್ನು ಐಎನ್ಎಸ್ ಕೊಚ್ಚಿ ಸಮರ ನೌಕೆಯು ಬುಧವಾರ ಮುಂಬೈ ಬಂದರಿಗೆ ತಂದಿತು.</p>.<p>ಭಾರತದ ಸಾರ್ವಜನಿಕ ವಲಯದ ತೈಲಶೋಧ ಕಂಪನಿ ಒಎನ್ಜಿಸಿ ನಾಲ್ಕು ಹಡಗುಗಳನ್ನು ಅರಬ್ಬಿ ಸಮುದ್ರ ದಲ್ಲಿ ನಿಯೋಜಿಸಿತ್ತು. ಪಿ-305 ಬಾರ್ಜ್, ಜಿಎಎಲ್ ಕನ್ಸ್ಟ್ರಕ್ಟರ್ ಬಾರ್ಜ್, ಎಸ್ಎಸ್ 3 ಮತ್ತು ಸಾಗರ್ ಭೂಷಣ್ ನೌಕೆಗಳು ಅಪಾಯಕ್ಕೆ ಸಿಲುಕಿದ್ದವು.ಪಿ-303 ಬಾರ್ಜ್ನಲ್ಲಿದ್ದ 261 ಸಿಬ್ಬಂದಿ ಪೈಕಿ 186 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.</p>.<p><strong>ಓದಿ:</strong><a href="https://www.prajavani.net/india-news/cyclone-tauktae-death-toll-climbs-to-45-in-gujarat-official-831672.html" itemprop="url">‘ತೌತೆ’ ಚಂಡಮಾರುತ: ಗುಜರಾತ್ನಲ್ಲಿ 45 ಮಂದಿ ಸಾವು</a></p>.<p>ಐಎನ್ಎಸ್ ಕೋಲ್ಕತಾ, ಐಎನ್ಎಸ್ ಬೆಟ್ವಾ ಮತ್ತು ಐಎನ್ಎಸ್ ಬಿಯಾಸ್ ಯುದ್ಧನೌಕೆಗಳು ಬದುಕುಳಿ ದವರನ್ನು ಹುಡುಕಲು ಮುಂಬೈ ಹೈ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ಪಿ8ಐ ಕಡಲ ಗಸ್ತು ವಿಮಾನ ಹಾಗೂ ಹೆಲಿಕಾಪ್ಟರ್ಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. </p>.<p>ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ವೆಸ್ಟರ್ನ್ ನೇವಲ್ ಕಮಾಂಡ್, ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತು.</p>.<p>ಕಳೆದ ಮೂರು ದಿನಗಳಲ್ಲಿ ಒಎನ್ಜಿಸಿಗೆ ಸಂಬಂಧಿಸಿದ 600ಕ್ಕೂ ಹೆಚ್ಚು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.ಜಿಎಎಲ್ ಕನ್ಸ್ಟ್ರಕ್ಟರ್ ಬಾರ್ಜ್ನಲ್ಲಿದ್ದಎಲ್ಲ 137 ಜನರನ್ನು ರಕ್ಷಿಸಲಾಗಿದೆ. ಇದಲ್ಲದೆ, ಸಾಗರ್ ಭೂಷಣ್ನಲ್ಲಿದ್ದ ಸಪೋರ್ಟ್ ಸ್ಟೇಷನ್ 3 ಮತ್ತು 101ರಲ್ಲಿದ್ದ ಎಲ್ಲ 196 ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>(ಜೈಪುರ ವರದಿ):</strong> ‘ತೌತೆ’ ಪರಿಣಾಮವಾಗಿ ರಾಜಸ್ಥಾನದ ದಕ್ಷಿಣದ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಭಾರಿ ಮಳೆ ಸುರಿದಿದೆ. ಬುಧವಾರವೂ ಮಳೆ ಮುಂದುವರಿದಿದೆ.</p>.<p>ಜೈಪುರದಲ್ಲಿ ಕೂಡ ಬಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಚಂಡಮಾರುತವು ಮಂಗಳವಾರ ರಾತ್ರಿ ರಾಜಸ್ಥಾನ ಪ್ರವೇಶಿಸಿತ್ತು. ವಿವಿಧ ಭಾಗಗಳಲ್ಲಿ ನಷ್ಟಕ್ಕೆ ಇದು ಕಾರಣವಾಗಿದೆ.</p>.<p>ಗುರುವಾರ ಬೆಳಿಗ್ಗಿನ ಹೊತ್ತಿಗೆ ಚಂಡಮಾರುತವು ದುರ್ಬಲಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಮುಂಬೈ ಕರಾವಳಿಯಲ್ಲಿ ಮುಲುಗಿದ ಪಿ–305 ಬಾರ್ಜ್ನಲ್ಲಿದ್ದ 22 ಮಂದಿ ಮೃತಪಟ್ಟಿದ್ದು, 53 ಮಂದಿಯ ಸುಳಿವು ಸಿಕ್ಕಿಲ್ಲ. 22 ಸಿಬ್ಬಂದಿಯ ಮೃತದೇಹಗಳನ್ನು ಐಎನ್ಎಸ್ ಕೊಚ್ಚಿ ಸಮರ ನೌಕೆಯು ಬುಧವಾರ ಮುಂಬೈ ಬಂದರಿಗೆ ತಂದಿತು.</p>.<p>ಭಾರತದ ಸಾರ್ವಜನಿಕ ವಲಯದ ತೈಲಶೋಧ ಕಂಪನಿ ಒಎನ್ಜಿಸಿ ನಾಲ್ಕು ಹಡಗುಗಳನ್ನು ಅರಬ್ಬಿ ಸಮುದ್ರ ದಲ್ಲಿ ನಿಯೋಜಿಸಿತ್ತು. ಪಿ-305 ಬಾರ್ಜ್, ಜಿಎಎಲ್ ಕನ್ಸ್ಟ್ರಕ್ಟರ್ ಬಾರ್ಜ್, ಎಸ್ಎಸ್ 3 ಮತ್ತು ಸಾಗರ್ ಭೂಷಣ್ ನೌಕೆಗಳು ಅಪಾಯಕ್ಕೆ ಸಿಲುಕಿದ್ದವು.ಪಿ-303 ಬಾರ್ಜ್ನಲ್ಲಿದ್ದ 261 ಸಿಬ್ಬಂದಿ ಪೈಕಿ 186 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.</p>.<p><strong>ಓದಿ:</strong><a href="https://www.prajavani.net/india-news/cyclone-tauktae-death-toll-climbs-to-45-in-gujarat-official-831672.html" itemprop="url">‘ತೌತೆ’ ಚಂಡಮಾರುತ: ಗುಜರಾತ್ನಲ್ಲಿ 45 ಮಂದಿ ಸಾವು</a></p>.<p>ಐಎನ್ಎಸ್ ಕೋಲ್ಕತಾ, ಐಎನ್ಎಸ್ ಬೆಟ್ವಾ ಮತ್ತು ಐಎನ್ಎಸ್ ಬಿಯಾಸ್ ಯುದ್ಧನೌಕೆಗಳು ಬದುಕುಳಿ ದವರನ್ನು ಹುಡುಕಲು ಮುಂಬೈ ಹೈ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ಪಿ8ಐ ಕಡಲ ಗಸ್ತು ವಿಮಾನ ಹಾಗೂ ಹೆಲಿಕಾಪ್ಟರ್ಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. </p>.<p>ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ವೆಸ್ಟರ್ನ್ ನೇವಲ್ ಕಮಾಂಡ್, ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತು.</p>.<p>ಕಳೆದ ಮೂರು ದಿನಗಳಲ್ಲಿ ಒಎನ್ಜಿಸಿಗೆ ಸಂಬಂಧಿಸಿದ 600ಕ್ಕೂ ಹೆಚ್ಚು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.ಜಿಎಎಲ್ ಕನ್ಸ್ಟ್ರಕ್ಟರ್ ಬಾರ್ಜ್ನಲ್ಲಿದ್ದಎಲ್ಲ 137 ಜನರನ್ನು ರಕ್ಷಿಸಲಾಗಿದೆ. ಇದಲ್ಲದೆ, ಸಾಗರ್ ಭೂಷಣ್ನಲ್ಲಿದ್ದ ಸಪೋರ್ಟ್ ಸ್ಟೇಷನ್ 3 ಮತ್ತು 101ರಲ್ಲಿದ್ದ ಎಲ್ಲ 196 ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>(ಜೈಪುರ ವರದಿ):</strong> ‘ತೌತೆ’ ಪರಿಣಾಮವಾಗಿ ರಾಜಸ್ಥಾನದ ದಕ್ಷಿಣದ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಭಾರಿ ಮಳೆ ಸುರಿದಿದೆ. ಬುಧವಾರವೂ ಮಳೆ ಮುಂದುವರಿದಿದೆ.</p>.<p>ಜೈಪುರದಲ್ಲಿ ಕೂಡ ಬಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಚಂಡಮಾರುತವು ಮಂಗಳವಾರ ರಾತ್ರಿ ರಾಜಸ್ಥಾನ ಪ್ರವೇಶಿಸಿತ್ತು. ವಿವಿಧ ಭಾಗಗಳಲ್ಲಿ ನಷ್ಟಕ್ಕೆ ಇದು ಕಾರಣವಾಗಿದೆ.</p>.<p>ಗುರುವಾರ ಬೆಳಿಗ್ಗಿನ ಹೊತ್ತಿಗೆ ಚಂಡಮಾರುತವು ದುರ್ಬಲಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>