ಮುಂಬೈ: ‘ತಮ್ಮ ಮಗನ ಸಾವಿನ ಕುರಿತು ಎಫ್ಐಆರ್ ದಾಖಲಿಸುವ ವಿಚಾರದಲ್ಲಿ ತಮ್ಮ ಕುಟುಂಬವು ಪೊಲೀಸರಿಂದ ಕಿರುಕುಳವನ್ನು ಎದುರಿಸುತ್ತಿದೆ ಎಂದು ಮೃತ ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ತಂದೆ ರಮೇಶ್ ಸೋಲಂಕಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.