‘ದೇಶದ ಭದ್ರತೆ ಹಾಗೂ ಸಾರ್ವಭೌಮತ್ವವನ್ನು ಯೋಧರು ಕಾಪಾಡುತ್ತಿದ್ದು, ಅವರ ಕೊಡುಗೆ ಇಲ್ಲದೇ 2025ರೊಳಗೆ ₹3 ಲಕ್ಷ ಕೋಟಿ ಆರ್ಥಿಕತೆಯನ್ನು ಹೊಂದುವುದನ್ನು ಭಾರತವು ಊಹಿಸಲೂ ಸಾಧ್ಯವಿಲ್ಲ. ದೇಶಕ್ಕಾಗಿ ಅವರು ನೀಡಿದ ಬಲಿದಾನಕ್ಕೆ ಪ್ರತಿಯಾಗಿ ನಾವು ಯಾವ ರೀತಿಯಲ್ಲೂ ಏನನ್ನೂ ನೀಡಲು ಸಾಧ್ಯವಿಲ್ಲ. ಯೋಧರಿಗೆ ನಮ್ಮ ಕೃತಜ್ಞತೆ ಸಲ್ಲಿಸುವ ಯಾವ ಅವಕಾಶವನ್ನೂ ನಾವು ಕಳೆದುಕೊಳ್ಳುವುದಿಲ್ಲ’ ಎಂದು ಸಿಂಗ್ ಹೇಳಿದರು.