ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸರ್ಕಾರದಿಂದ ಆಮ್ಲಜನಕ ಟ್ಯಾಂಕರ್‌ ದರೋಡೆ: ಸಚಿವ ವಿಜ್‌ ಆರೋಪ

Last Updated 21 ಏಪ್ರಿಲ್ 2021, 13:32 IST
ಅಕ್ಷರ ಗಾತ್ರ

ಚಂಡೀಗಡ: ಕೋವಿಡ್‌–19 ರೋಗಿಗಳಿಗೆ ನೀಡುವ ಸಲುವಾಗಿ ಪಾಣಿಪತ್‌ನಿಂದ ಫರೀದಾಬಾದ್‌ಗೆ ಆಮ್ಲಜನಕ ಸಾಗಿಸುತ್ತಿ್ದ ಟ್ಯಾಂಕರ್‌ಅನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌ ಬುಧವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಪಾಣಿಪತ್‌ನಿಂದ ಫರೀದಾಬಾದ್‌ಗೆ ಬರುವಾಗ ದೆಹಲಿ ಮೂಲಕ ಟ್ಯಾಂಕರ್‌ ಸಾಗುತ್ತಿತ್ತು. ಆಗ, ಟ್ಯಾಂಕರ್‌ಅನ್ನು ದೋಚಲಾಗಿದೆ. ಸರ್ಕಾರವೇ ಇಂಥ ಕೃತ್ಯಗಳಲ್ಲಿ ತೊಡಗಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು’ ಎಂದರು.

‘ರಾಜ್ಯದ ಆಸ್ಪತ್ರೆಗಳಿಗೆ ಆಮ್ಲಜನಕ ಹೊತ್ತು ತರುವ ಟ್ಯಾಂಕರ್‌ಗಳಿಗೆ ಈಗ ಪೊಲೀಸ್‌ ಭದ್ರತೆ ಒದಗಿಸಲಾಗುತ್ತಿದೆ. ಈ ಘಟನೆ ಬಗ್ಗೆ ದೆಹಲಿ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT