‘ಈಗ ನೀಡುತ್ತಿರುವಂತೆ 490 ಟನ್ ಅಲ್ಲ, ಪ್ರತಿ ದಿನ 700 ಟನ್ ಆಮ್ಲಜನಕ ಒದಗಿಸಬೇಕು ಎಂದು ಏಪ್ರಿಲ್ 30ರಂದು ವಿವರವಾದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ನ್ಯಾಯಾಂಗ ನಿಂದನೆ ನಮ್ಮಲ್ಲಿರುವ ಕೊನೆಯ ಅಸ್ತ್ರ. ಆದರೆ, ಆ ವಿಚಾರ ನಮ್ಮ ತಲೆಯಲ್ಲಿ ಖಂಡಿತವಾಗಿಯೂ ಇದೆ. ಅಲ್ಲಿಯ ತನಕ ಹೋಗುವಂತೆ ಮಾಡಬೇಡಿ. ಈವರೆಗೆ ಆಗಿರುವುದು ಸಾಕಾಗಿದೆ. ಇದು ಕಾರ್ಯರೂಪಕ್ಕೆ ಬರಬೇಕಾದ ಮಾತು. ದೆಹಲಿಗೆ ದಿನಕ್ಕೆ 700 ಟನ್ ಆಮ್ಲಜನಕ ಪೂರೈಸುವ ವಿಚಾರದಲ್ಲಿ ‘ಇಲ್ಲ’ ಎಂಬುದನ್ನು ನಾವು ಕೇಳಿಸಿಕೊಳ್ಳುವುದೇ ಇಲ್ಲ’ ಎಂದು ಹೈಕೋರ್ಟ್ ಹೇಳಿದೆ.