<p><strong>ನವದೆಹಲಿ:</strong>72ನೇ ಗಣರಾಜ್ಯೋತ್ಸವದ ದಿನ ರಾಜಧಾನಿ ದೆಹಲಿ ಅಕ್ಷರಶಃ ರಣಾಂಗಣವಾಗಿತ್ತು,. ರೈತರ ಹೋರಾಟ ಹಿಂಸೆಗೆ ತಿರುಗಿದ್ದರಿಂದ ದಂಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯ್ತು.</p>.<p>ಬ್ಯಾರಿಕೇಡ್ ಮುರಿದು ಒಳನುಗ್ಗಿದ ರೈತರು, ಪೊಲೀಸರ ಜೊತೆ ಸಂಘರ್ಷ, ಕೆಂಪುಕೋಟೆ ಮೇಲೆ ಅನ್ಯ ಧ್ವಜದ ಹಾರಾಟ, ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಗೋಡೆ ಹಾರಿ, ಕಂದಕಕ್ಕೆ ಧುಮುಕಿದ ಪೊಲೀಸರು. ಹೀಗೆ ನಿನ್ನೆ ಹಲವು ಅಹಿತಕರ ಘಟನೆಗಳು ಟ್ವಿಟ್ಟರ್ನಲ್ಲಿ #DelhiUnderAttack ಹ್ಯಾಶ್ಟ್ಯಾಗ್ ಮೂಲಕ ಟ್ರೆಂಡ್ ಆಗಿವೆ.</p>.<p>ನಿನ್ನೆ ಪ್ರತಿಭಟನಾಕಾರರ ದಾಳಿ ವೇಳೆ ನಮ್ಮನ್ನು ಹೊಡೆಯಬೇಡಿ ಎಂದು ಪೊಲೀಸರು ಕೈಮುಗಿಯುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಮನೋಜ್ ಕುಮಾರ್ ಎಂಬುವವರು. ಈ ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ ಎಂದು ಶೀರ್ಷಿಕೆ ನೀಡಿದ್ಧಾರೆ.</p>.<p>ಇನ್ನೂ ಕೆಲವರು 26/11 ಮುಂಬೈ ದಾಳಿಗೆ ದೆಹಲಿ ಹಿಂಸಾಚಾರವನ್ನು ಹೋಲಿಸಿದ್ದಾರೆ.</p>.<p>ಈ ಹಿಂಸೆಯನ್ನು ನೋಡಿ ನಾನು ಕಣ್ಣೀರು ಹಾಕಿದೆ.ನೀವೂ ನೋಡಿ ಕಣ್ಣೀರು ಹಾಕಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.</p>.<p>ಈ ಮಧ್ಯೆ, ನೆರೆಯ ಪಾಕಿಸ್ತಾನದ ಪಾಕಿಸ್ತಾನ ಮುಸ್ಲಿಂ ಲೀಗ್, ದೆಹಲಿ ಹಿಂಸಾಚಾರವನ್ನು ಸಂಭ್ರಮಿಸಿದೆ. ಗಣರಾಜ್ಯೋವದ ಬ್ಲ್ಯಾಕ್ ಡೇ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.</p>.<p>ಇದನ್ನೂ ಓದಿ.. <strong>Explainer: <a href="https://www.prajavani.net/explainer/an-explainer-on-sixty-days-of-peaceful-farmers-protest-takes-a-violent-turn-in-delhi-800010.html">ದೆಹಲಿಯಲ್ಲಿ ಹಿಂಸೆಗೆ ತಿರುಗಿದ 60 ದಿನಗಳ ಶಾಂತಿಯುತ ರೈತ ಹೋರಾಟ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>72ನೇ ಗಣರಾಜ್ಯೋತ್ಸವದ ದಿನ ರಾಜಧಾನಿ ದೆಹಲಿ ಅಕ್ಷರಶಃ ರಣಾಂಗಣವಾಗಿತ್ತು,. ರೈತರ ಹೋರಾಟ ಹಿಂಸೆಗೆ ತಿರುಗಿದ್ದರಿಂದ ದಂಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾಯ್ತು.</p>.<p>ಬ್ಯಾರಿಕೇಡ್ ಮುರಿದು ಒಳನುಗ್ಗಿದ ರೈತರು, ಪೊಲೀಸರ ಜೊತೆ ಸಂಘರ್ಷ, ಕೆಂಪುಕೋಟೆ ಮೇಲೆ ಅನ್ಯ ಧ್ವಜದ ಹಾರಾಟ, ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಗೋಡೆ ಹಾರಿ, ಕಂದಕಕ್ಕೆ ಧುಮುಕಿದ ಪೊಲೀಸರು. ಹೀಗೆ ನಿನ್ನೆ ಹಲವು ಅಹಿತಕರ ಘಟನೆಗಳು ಟ್ವಿಟ್ಟರ್ನಲ್ಲಿ #DelhiUnderAttack ಹ್ಯಾಶ್ಟ್ಯಾಗ್ ಮೂಲಕ ಟ್ರೆಂಡ್ ಆಗಿವೆ.</p>.<p>ನಿನ್ನೆ ಪ್ರತಿಭಟನಾಕಾರರ ದಾಳಿ ವೇಳೆ ನಮ್ಮನ್ನು ಹೊಡೆಯಬೇಡಿ ಎಂದು ಪೊಲೀಸರು ಕೈಮುಗಿಯುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಮನೋಜ್ ಕುಮಾರ್ ಎಂಬುವವರು. ಈ ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ ಎಂದು ಶೀರ್ಷಿಕೆ ನೀಡಿದ್ಧಾರೆ.</p>.<p>ಇನ್ನೂ ಕೆಲವರು 26/11 ಮುಂಬೈ ದಾಳಿಗೆ ದೆಹಲಿ ಹಿಂಸಾಚಾರವನ್ನು ಹೋಲಿಸಿದ್ದಾರೆ.</p>.<p>ಈ ಹಿಂಸೆಯನ್ನು ನೋಡಿ ನಾನು ಕಣ್ಣೀರು ಹಾಕಿದೆ.ನೀವೂ ನೋಡಿ ಕಣ್ಣೀರು ಹಾಕಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.</p>.<p>ಈ ಮಧ್ಯೆ, ನೆರೆಯ ಪಾಕಿಸ್ತಾನದ ಪಾಕಿಸ್ತಾನ ಮುಸ್ಲಿಂ ಲೀಗ್, ದೆಹಲಿ ಹಿಂಸಾಚಾರವನ್ನು ಸಂಭ್ರಮಿಸಿದೆ. ಗಣರಾಜ್ಯೋವದ ಬ್ಲ್ಯಾಕ್ ಡೇ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.</p>.<p>ಇದನ್ನೂ ಓದಿ.. <strong>Explainer: <a href="https://www.prajavani.net/explainer/an-explainer-on-sixty-days-of-peaceful-farmers-protest-takes-a-violent-turn-in-delhi-800010.html">ದೆಹಲಿಯಲ್ಲಿ ಹಿಂಸೆಗೆ ತಿರುಗಿದ 60 ದಿನಗಳ ಶಾಂತಿಯುತ ರೈತ ಹೋರಾಟ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>