<p class="title"><strong>ನವದೆಹಲಿ</strong>: ಚೀನಾ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಎಂಟು ಅಂಶಗಳಿರುವ ಸಲಹೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮುಂದಿಟ್ಟಿದ್ದಾರೆ.</p>.<p class="title">ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ನಿರ್ವಹಣೆ ಕುರಿತಂತೆ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು, ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಏಷ್ಯಾ ಖಂಡದಲ್ಲಿ ಅಭಿವೃದ್ಧಿ ಕುರಿತಂತೆ ಪರಸ್ಪರರ ಆಕಾಂಕ್ಷೆಗಳನ್ನು ಗೌರವಿಸಬೇಕು ಎಂಬುದು ಇದರಲ್ಲಿ ಸೇರಿದೆ.</p>.<p class="title">ಭಾರತ–ಚೀನಾ ಸಂಬಂಧ ಕುರಿತಂತೆ ಆನ್ಲೈನ್ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್ ಅವರು, ಕಳೆದ ವರ್ಷ ಪೂರ್ವ ಲಡಾಖ್ನಲ್ಲಿ ನಡೆದ ಘಟನೆ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಗಡಿರೇಖೆಯಲ್ಲಿ ಬದಲಾವಣೆ ತರುವ ಯಾವುದೇ ಪ್ರಯತ್ನವೂ ಒಪ್ಪಿತವಲ್ಲ ಎಂದು ಭಾರತದ ನಿಲುವನ್ನು ಅವರು ಸ್ಪಷ್ಟಪಡಿಸಿದರು.</p>.<p class="title">ಗಡಿಯಲ್ಲಿ ಇರುವ ಈಗಿನ ಸ್ಥಿತಿ ಕಡೆಗಣಿಸಬಹುದು ಹಾಗೂ ಜನರ ಬದುಕಿಗೂ ಧಕ್ಕೆಯಾಗದು ಎಂಬ ನಿಲುವು ವಾಸ್ತವವಾಗಿ ಅಷ್ಟು ಸರಳವಾದುದಲ್ಲ. ಪ್ರಸ್ತುತ ಉಭಯ ದೇಶಗಳ ನಡುವಿನ ಬಾಂಧವ್ಯ ಕವಲುದಾರಿಯಲ್ಲಿದೆ. ನಮ್ಮ ಆಯ್ಕೆಗಳು ಈಗ ವಿಶ್ವದ ದೃಷ್ಟಿಯಿಂದ ಆಗಬೇಕಾಗಿದೆ ಎಂದು ಹೇಳಿದರು.</p>.<p>ಈ ದಿನದವರೆಗೂ ಚೀನಾ ಕಡೆಯಿಂದ ಪೂರ್ವ ಲಡಾಖ್ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೇನೆಯ ನಿಯೋಜನೆ, ನಿಲುವಿನಲ್ಲಿ ಬದಲಾವಣೆ ಕುರಿತಂತೆ ಚೀನಾದಿಂದ ಖಚಿತವಾದ ವಿವರಣೆಯು ಇದುವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಚೀನಾ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಎಂಟು ಅಂಶಗಳಿರುವ ಸಲಹೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮುಂದಿಟ್ಟಿದ್ದಾರೆ.</p>.<p class="title">ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ನಿರ್ವಹಣೆ ಕುರಿತಂತೆ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು, ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಏಷ್ಯಾ ಖಂಡದಲ್ಲಿ ಅಭಿವೃದ್ಧಿ ಕುರಿತಂತೆ ಪರಸ್ಪರರ ಆಕಾಂಕ್ಷೆಗಳನ್ನು ಗೌರವಿಸಬೇಕು ಎಂಬುದು ಇದರಲ್ಲಿ ಸೇರಿದೆ.</p>.<p class="title">ಭಾರತ–ಚೀನಾ ಸಂಬಂಧ ಕುರಿತಂತೆ ಆನ್ಲೈನ್ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್ ಅವರು, ಕಳೆದ ವರ್ಷ ಪೂರ್ವ ಲಡಾಖ್ನಲ್ಲಿ ನಡೆದ ಘಟನೆ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಗಡಿರೇಖೆಯಲ್ಲಿ ಬದಲಾವಣೆ ತರುವ ಯಾವುದೇ ಪ್ರಯತ್ನವೂ ಒಪ್ಪಿತವಲ್ಲ ಎಂದು ಭಾರತದ ನಿಲುವನ್ನು ಅವರು ಸ್ಪಷ್ಟಪಡಿಸಿದರು.</p>.<p class="title">ಗಡಿಯಲ್ಲಿ ಇರುವ ಈಗಿನ ಸ್ಥಿತಿ ಕಡೆಗಣಿಸಬಹುದು ಹಾಗೂ ಜನರ ಬದುಕಿಗೂ ಧಕ್ಕೆಯಾಗದು ಎಂಬ ನಿಲುವು ವಾಸ್ತವವಾಗಿ ಅಷ್ಟು ಸರಳವಾದುದಲ್ಲ. ಪ್ರಸ್ತುತ ಉಭಯ ದೇಶಗಳ ನಡುವಿನ ಬಾಂಧವ್ಯ ಕವಲುದಾರಿಯಲ್ಲಿದೆ. ನಮ್ಮ ಆಯ್ಕೆಗಳು ಈಗ ವಿಶ್ವದ ದೃಷ್ಟಿಯಿಂದ ಆಗಬೇಕಾಗಿದೆ ಎಂದು ಹೇಳಿದರು.</p>.<p>ಈ ದಿನದವರೆಗೂ ಚೀನಾ ಕಡೆಯಿಂದ ಪೂರ್ವ ಲಡಾಖ್ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೇನೆಯ ನಿಯೋಜನೆ, ನಿಲುವಿನಲ್ಲಿ ಬದಲಾವಣೆ ಕುರಿತಂತೆ ಚೀನಾದಿಂದ ಖಚಿತವಾದ ವಿವರಣೆಯು ಇದುವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>