ಜಲ್ಪೈಗುರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, 'ದೀದಿ ತುಂಬಾ ಆಕ್ರೋಶಗೊಳ್ಳುತ್ತಿದ್ದು, ನೀವು 'ಜೈ ಶ್ರೀರಾಮ್' ಘೋಷಣೆ ಕೂಗಿದರೆ ಜೈಲಿಗೆ ಕಳುಹಿಸುತ್ತಾರೆ. ನನ್ನಿಂದ ಅಥವಾ ಬಿಜೆಪಿಯಿಂದ ಕಿರಿಕಿರಿಯಾಗಿರಬಹುದು. ಆದರೆ 'ಶ್ರೀರಾಮ' ಯಾಕೆ ? ಶ್ರೀರಾಮನ ವಿರುದ್ಧ ಹೋರಾಡಲು ಯಾರಾದರೂ ಧೈರ್ಯ ಮಾಡಿದರೆ ಕೆಟ್ಟ ಫಲಿತಾಂಶವನ್ನು ಎದುರಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಪತನನಿಶ್ಚಿತ' ಎಂದು ಹೇಳಿದ್ದಾರೆ.