ಈ ಬಗ್ಗೆ ಟ್ವೀಟ್ ಮಾಡಿರುವ ಅವರು,‘ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯು ಇಂದಿಗೆ ಒಂದು ತಿಂಗಳು ಪೂರೈಸಿದೆ. ತಮ್ಮ ಆತ್ಮೀಯ ಶ್ರೀಮಂತ ಸ್ನೇಹಿತರಿಗಾಗಿ ಬಿಜೆಪಿಯು ರೈತರು, ಕಾರ್ಮಿಕರು, ಮಧ್ಯಮ ಮತ್ತು ಕೆಳವರ್ಗದರ ಇಚ್ಛೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ರೈತರ ಈ ಪ್ರತಿಭಟನೆಯು ಬಿಜೆಪಿ ಸರ್ಕಾರದ ವೈಫಲ್ಯದ ಜೀವಂತ ಸ್ಮಾರಕವಾಗಿದೆ’ ಎಂದಿದ್ದಾರೆ.