ನವದೆಹಲಿ: ಕ್ವಿಟ್ ಇಂಡಿಯಾ ಆಂದೋಲನದ 78ನೇ ವಾರ್ಷಿಕೋತ್ಸವ ಸ್ಮರಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು,ಆಂದೋಲನ ಆರಂಭವಾದಾಗ ಗಾಂಧೀಜಿ ಅವರು ನೀಡಿದ್ದ 'ಮಾಡು, ಇಲ್ಲವೆ ಮಡಿ' ಘೋಷಣೆಗೆ 'ಹೆದರಬೇಡಿ, ನ್ಯಾಯಕ್ಕಾಗಿ ಹೋರಾಡಿ'ಎಂಬಹೊಸ ವ್ಯಾಖ್ಯಾನ ನೀಡಬೇಕಾಗಿದೆ ಎಂದಿದ್ದಾರೆ.
1942ರ ಆಗಸ್ಟ್ 8 ರಂದು ಬಾಂಬೆಯಲ್ಲಿ ನಡೆದಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಮ್ಮೇಳನದಲ್ಲಿ ಗಾಂಧೀಜಿ ಅವರು,ದೇಶದಲ್ಲಿ ಬ್ರಿಟಿಷ್ ಆಳ್ವಿಕೆಗೆ ಅಂತ್ಯವಾಡಲು ಆಗ್ರಹಿಸಿ ಕ್ವಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದ್ದರು. ಜನರು ಭಾಗವಹಿಸಬೇಕು ಎಂದು ಕರೆ ನೀಡುತ್ತಾ 'ಮಾಡಿ, ಇಲ್ಲವೇ ಮಡಿಯಿರಿ' ಎಂದು ಘೋಷಿಸಿದ್ದರು.
ಈ ಘೋಷಣೆಗೆ ಈಗ ಹೊಸ ವ್ಯಾಖ್ಯಾನ ನೀಡಬೇಕಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.