<p class="title"><strong>ಲಖನೌ</strong>: 2024ರಲ್ಲಿ ಪ್ರಧಾನಿ ಮೋದಿಯವರು ಮತ್ತೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು 2022ರಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.</p>.<p class="bodytext">ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯೋಗಿ ಅವರ ಮುಖದ ಬಗ್ಗೆ ಹರಿದಾಡಿದ ಊಹಾಪೋಹಗಳಿಗೆ ಅವರು ತಿರುಗೇಟು ನೀಡಿದರು.</p>.<p class="bodytext">ಇಲ್ಲಿಯ ಡಿಫೆನ್ಸ್ ಎಕ್ಸ್ಪೋ ಮೈದಾನದಲ್ಲಿ ಬಿಜೆಪಿಯ ಸದಸ್ಯ ವಿಸ್ತರಣಾ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿಯ ಸಂಚಾಲಕರು ಮತ್ತು ಅವಧ್ ಪ್ರದೇಶದ ಪಕ್ಷದ ಉಸ್ತುವಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದರು.</p>.<p class="bodytext">‘ನಮ್ಮ ಪರಿವಾರ, ಬಿಜೆಪಿ ಪರಿವಾರ’ ಎಂಬ ಘೋಷವಾಕ್ಯವನ್ನು ಅವರು ಇದೇ ವೇಳೆ ಅನಾವರಣಗೊಳಿಸಿದರು.</p>.<p class="bodytext">‘ಮೋದಿ ಅವರು ಪ್ರಧಾನಿಯಾಗಿದ್ದಾಗ ಉತ್ತರ ಪ್ರದೇಶಕ್ಕೆ ಬೇಕಾದ ಎಲ್ಲವನ್ನೂ ಮಾಡುತ್ತಾರೆ. ಆದ್ದರಿಂದ ಮೋದಿ ಅವರ ನೇತೃತ್ವದಲ್ಲಿ 2024ರ ಲೋಕಸಭೆ ಚುನಾವಣೆಯನ್ನು ಮತ್ತೊಮ್ಮೆ ಗೆಲ್ಲಬೇಕು. ಅದಕ್ಕಾಗಿ ಇಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದೆ’ ಎಂದು ಅಮಿತ್ ಶಾ ಹೇಳಿದರು.</p>.<p class="bodytext">‘ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕಿದೆ. ಅದಕ್ಕಾಗಿ ಯೋಗಿ ಅವರನ್ನು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಂದು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ’ ಎಂದು ಅವರು ಹೇಳಿದರು.</p>.<p class="bodytext">2014, 2017 ಮತ್ತು 2019ರ ಚುನಾವಣೆಗಳಿಗೆ ಮೊದಲೇಬಿಜೆಪಿಯ ಸದಸ್ಯತ್ವ ವಿಸ್ತರಣೆ ಅಭಿಯಾನವನ್ನು ಆರಂಭಿಸಲಾಗಿದೆ. 2022ರ ಚುನಾವಣೆಗೆ ಶುಕ್ರವಾರದಿಂದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಶಾ ಹೇಳಿದರು.</p>.<p class="bodytext">‘ರಾಜ್ಯದಲ್ಲಿ ಸರ್ಕಾರ ರಚನೆಯಾಗಿರುವುದು ಕುಟುಂಬಕ್ಕಾಗಿ ಅಲ್ಲ, ಬಡವರ ಅಭಿವೃದ್ಧಿಗೆ ಎಂದು ಬಿಜೆಪಿಯು ಮೊದಲ ಬಾರಿಗೆ ಸಾಬೀತುಪಡಿಸಿದೆ’ ಎಂದು ಶಾ ಅವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.</p>.<p class="bodytext">‘ಚುನಾವಣಾ ಘೋಷಣೆಗಳು ಮೊಳಗಿದ ನಂತರ ಮನೆಯಲ್ಲಿ ಕುಳಿತಿದ್ದವರು ತಮ್ಮ ಸರ್ಕಾರ ರಚನೆಯಾಗಲಿದೆ ಎಂದು ಬಿಂಬಿಸಲು ಹೊಸ ಬಟ್ಟೆ ತೊಟ್ಟಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಮುಖಂಡರನ್ನು ಅಮಿತ್ ಲೇವಡಿ ಮಾಡಿದರು.</p>.<p class="bodytext">‘ಅಖಿಲೇಶ್ ಅವರು ಈ ಐದು ವರ್ಷಗಳಲ್ಲಿ ತಾವು ಎಷ್ಟು ಬಾರಿ ವಿದೇಶದಲ್ಲಿದ್ದರು ಎಂಬ ದಾಖಲೆಯನ್ನು ಉತ್ತರ ಪ್ರದೇಶದ ಜನರಿಗೆ ನೀಡಬೇಕು’ ಎಂದು ಶಾ ಕುಟುಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಲಖನೌ</strong>: 2024ರಲ್ಲಿ ಪ್ರಧಾನಿ ಮೋದಿಯವರು ಮತ್ತೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು 2022ರಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.</p>.<p class="bodytext">ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯೋಗಿ ಅವರ ಮುಖದ ಬಗ್ಗೆ ಹರಿದಾಡಿದ ಊಹಾಪೋಹಗಳಿಗೆ ಅವರು ತಿರುಗೇಟು ನೀಡಿದರು.</p>.<p class="bodytext">ಇಲ್ಲಿಯ ಡಿಫೆನ್ಸ್ ಎಕ್ಸ್ಪೋ ಮೈದಾನದಲ್ಲಿ ಬಿಜೆಪಿಯ ಸದಸ್ಯ ವಿಸ್ತರಣಾ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿಯ ಸಂಚಾಲಕರು ಮತ್ತು ಅವಧ್ ಪ್ರದೇಶದ ಪಕ್ಷದ ಉಸ್ತುವಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದರು.</p>.<p class="bodytext">‘ನಮ್ಮ ಪರಿವಾರ, ಬಿಜೆಪಿ ಪರಿವಾರ’ ಎಂಬ ಘೋಷವಾಕ್ಯವನ್ನು ಅವರು ಇದೇ ವೇಳೆ ಅನಾವರಣಗೊಳಿಸಿದರು.</p>.<p class="bodytext">‘ಮೋದಿ ಅವರು ಪ್ರಧಾನಿಯಾಗಿದ್ದಾಗ ಉತ್ತರ ಪ್ರದೇಶಕ್ಕೆ ಬೇಕಾದ ಎಲ್ಲವನ್ನೂ ಮಾಡುತ್ತಾರೆ. ಆದ್ದರಿಂದ ಮೋದಿ ಅವರ ನೇತೃತ್ವದಲ್ಲಿ 2024ರ ಲೋಕಸಭೆ ಚುನಾವಣೆಯನ್ನು ಮತ್ತೊಮ್ಮೆ ಗೆಲ್ಲಬೇಕು. ಅದಕ್ಕಾಗಿ ಇಲ್ಲಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿದೆ’ ಎಂದು ಅಮಿತ್ ಶಾ ಹೇಳಿದರು.</p>.<p class="bodytext">‘ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕಿದೆ. ಅದಕ್ಕಾಗಿ ಯೋಗಿ ಅವರನ್ನು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಂದು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ’ ಎಂದು ಅವರು ಹೇಳಿದರು.</p>.<p class="bodytext">2014, 2017 ಮತ್ತು 2019ರ ಚುನಾವಣೆಗಳಿಗೆ ಮೊದಲೇಬಿಜೆಪಿಯ ಸದಸ್ಯತ್ವ ವಿಸ್ತರಣೆ ಅಭಿಯಾನವನ್ನು ಆರಂಭಿಸಲಾಗಿದೆ. 2022ರ ಚುನಾವಣೆಗೆ ಶುಕ್ರವಾರದಿಂದ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಶಾ ಹೇಳಿದರು.</p>.<p class="bodytext">‘ರಾಜ್ಯದಲ್ಲಿ ಸರ್ಕಾರ ರಚನೆಯಾಗಿರುವುದು ಕುಟುಂಬಕ್ಕಾಗಿ ಅಲ್ಲ, ಬಡವರ ಅಭಿವೃದ್ಧಿಗೆ ಎಂದು ಬಿಜೆಪಿಯು ಮೊದಲ ಬಾರಿಗೆ ಸಾಬೀತುಪಡಿಸಿದೆ’ ಎಂದು ಶಾ ಅವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.</p>.<p class="bodytext">‘ಚುನಾವಣಾ ಘೋಷಣೆಗಳು ಮೊಳಗಿದ ನಂತರ ಮನೆಯಲ್ಲಿ ಕುಳಿತಿದ್ದವರು ತಮ್ಮ ಸರ್ಕಾರ ರಚನೆಯಾಗಲಿದೆ ಎಂದು ಬಿಂಬಿಸಲು ಹೊಸ ಬಟ್ಟೆ ತೊಟ್ಟಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಮುಖಂಡರನ್ನು ಅಮಿತ್ ಲೇವಡಿ ಮಾಡಿದರು.</p>.<p class="bodytext">‘ಅಖಿಲೇಶ್ ಅವರು ಈ ಐದು ವರ್ಷಗಳಲ್ಲಿ ತಾವು ಎಷ್ಟು ಬಾರಿ ವಿದೇಶದಲ್ಲಿದ್ದರು ಎಂಬ ದಾಖಲೆಯನ್ನು ಉತ್ತರ ಪ್ರದೇಶದ ಜನರಿಗೆ ನೀಡಬೇಕು’ ಎಂದು ಶಾ ಕುಟುಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>