ಒಂದು ಕಾಲದಲ್ಲಿ ಮಮತಾ ಅವರ ಆತ್ಮೀಯ ಬಳಗದಲ್ಲಿದ್ದ ಸುವೇಂದು ಅಧಿಕಾರಿ ಡಿಸೆಂಬರ್ನಲ್ಲಿ ಶಾಸಕ ಸ್ಥಾನಕ್ಕೆ ಹಾಗೂ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ರಾಜೀನಾಮೆ ನೀಡಿದ್ದರು. ಬಳಿಕ ಅವರು ಬಿಜೆಪಿಗೆ ಸೇರಿದ್ದರು. ಸ್ವಾಭಿಮಾನವುಳ್ಳವರು ಟಿಎಂಸಿಯಲ್ಲಿರಲು ಅಸಾಧ್ಯ ಎಂದಿದ್ದ ಅಧಿಕಾರಿ, ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ಮಮತಾ ಹಾಗೂ ಅಧಿಕಾರಿ ನಡುವೆ ವಾಕ್ಸಮರ ಮುಂದುವರಿದಿತ್ತು.