‘ಮಕ್ಕಳ ಪಾಲಕರು ತಮ್ಮ ಹಿರಿಯ ಮಗನೊಂದಿಗೆ ಕುಟುಂಬದ ಸದಸ್ಯರೊಬ್ಬರ ‘ದಶಕ್ರಿಯಾ’ಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜಮೀನಿನ ಮಾಲೀಕ ಮನೆಗೆ ತೆರಳಿದ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ಹಳ್ಳಿಯ ಜನರಿಗೆ ಹಾಗೂ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದರು. ಸಂಗೀತ(13), ರಾಹುಲ್ (11), ಅನಿಲ್(8) ಹಾಗೂ ನಾನಿ(6) ಮೃತಪಟ್ಟ ಮಕ್ಕಳು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.