ಖಾದ್ಯ ತೈಲದ ಬೆಲೆ ಆರು ತಿಂಗಳಲ್ಲಿ ದ್ವಿಗುಣಗೊಂಡಿದೆ. ಕೋವಿಡ್ ಪರಿಣಾಮ ನಿರುದ್ಯೋಗ, ಸಂಬಳ ಕಡಿತದಿಂದಾಗಿ ಸಂಕಷ್ಟ ಕ್ಕೀಡಾಗಿರುವ ಜನರಿಗೆ ಬೆಲೆ ಏರಿಕೆಯು ಇನ್ನಷ್ಟು ಹೊರೆಯಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ ವತಿಯಿಂದ ಬ್ಲಾಕ್, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.