<p><strong>ಶ್ರೀನಗರ:</strong> ಹಿಂಸೆಯ ಹಾದಿ ತ್ಯಜಿಸಿ ಶರಣಾಗುವ ಭಯೋತ್ಪಾದಕರಿಗೆ ಪುನವರ್ಸತಿ ಕಲ್ಪಿಸುವ ಕೇಂದ್ರ ಸರ್ಕಾರದ ‘ಶರಣಾಗತಿ-ಪುನರ್ವಸತಿ ನೀತಿ‘ ಅಂತಿಮ ಹಂತದಲ್ಲಿದ್ದು, ಪ್ರಸ್ತುತ ಈ ವಿಷಯದ ಕುರಿತು ರಕ್ಷಣೆ ಮತ್ತು ಗೃಹ ಸಚಿವಾಲಯಗಳು ಚರ್ಚೆ ನಡೆಸುತ್ತಿರುವುದಾಗಿ ಉನ್ನತ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.</p>.<p>ಈ ನೀತಿಗೆ ಸಂಬಂಧಿಸಿದಂತೆ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕೇಂದ್ರಕ್ಕೆ ಶಿಫಾಸುಗಳನ್ನು ಕಳುಹಿಸಿದ್ದಾರೆ. ಶೀಘ್ರದಲ್ಲೇ ಹೊಸ ಶರಣಾಗತಿ ನೀತಿ ಜಾರಿಯಾಗುವ ಎಲ್ಲ ಸಾಧ್ಯತೆಗಳಿವೆ.</p>.<p>‘ಭಯೋತ್ಪಾದನೆ ಬಿಟ್ಟು ಮುಖ್ಯವಾಹಿನಿಗೆ ಮರಳುವ ಉಗ್ರರಿಗೆ ಭದ್ರತೆ ಒದಗಿಸುವ ಜತೆಗೆ ಅವರು ಸಂತೋಷದಿಂದ ಜೀವನ ನಡೆಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವುದು ಹೊಸ ನೀತಿಯ ಮೂಲ ಉದ್ದೇಶವಾಗಿದೆ. ಈ ನೀತಿಯು ಶರಣಾಗುವ ಸ್ಥಳೀಯ ಉಗ್ರರ ವಿರುದ್ಧ ವಿಚಾರಣೆ ನಡೆಸದೇ, ಕ್ಷಮಾದಾನ ನೀಡುವುದು ಹಾಗೂ ಶರಣಾದವರಿಗೆ ಉದ್ಯೋಗ ನೀಡಲು, ಅವರ ಹಿಂದಿನ ಚಟುವಟಿಕೆಗಳು ಅಡ್ಡಿಯಾಗದಂತೆ ಮಾಡುವುದು ಈ ನೀತಿಯ ಉದ್ದೇಶವಾಗಿದೆ‘ ಎಂದು ಮೂಲಗಳು ತಿಳಿಸಿವೆ.</p>.<p>ಶ್ರೀನಗರದ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಅವರು ‘ಸರ್ಕಾರ ಈ ಹೊಸ ನೀತಿಯನ್ನು ಪರಿಶೀಲಿಸುತ್ತಿದೆ. ಈ ನೀತಿಯಲ್ಲಿ ಅನೇಕ ಸಮಸ್ಯೆಗಳಿವೆ‘ ಎಂದು ಹೇಳಿದ್ದಾರೆ. ‘ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಹೊರಗಿನಿಂದ ಪಡೆಗಳನ್ನು ಬಳಸದಂತೆ‘ ಅವರು ನಿರ್ದೇಶಿಸಿದ್ದಾರೆ.</p>.<p>‘ಕೃತ್ಯದಲ್ಲಿ ಸ್ಥಳೀಯ ಉಗ್ರಗಾಮಿಗಳು ಭಾಗಿಯಾಗಿದ್ದರೆ, ಮೊದಲಿಗೆ ಅವರನ್ನು ಶರಣಾಗತಿಯಾಗಲು ತಿಳಿಸುತ್ತೇವೆ. ಯಾವುದೋ ಕಾರಣಕ್ಕೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ನಿಂತು ಫೋಟೊ ತೆಗೆಸಿಕೊಂಡಿದ್ದಾನೆಂದರೆ, ಆತ ಸಾಯಬೇಕೆಂದು ಅರ್ಥವಲ್ಲ‘ ಎಂದು ಅಧಿಕಾರಿ ಹೇಳಿದರು.</p>.<p>ಉತ್ತರ ಕಾಶ್ಮೀರ ಮೂಲದ ಜಿಒಸಿ ಕಿಲೊ ಫೋರ್ಸ್, ಮೇಜರ್ ಜನರಲ್ ಫೋರ್ಸ್ ಎಚ್.ಎಸ್.ಶಾಹಿ ಅವರು ಗುರುವಾರ, ‘ಉಗ್ರಗಾಮಿಗಳ ಶರಣಾಗತಿ ಮತ್ತು ಪುನವರ್ಸತಿಗೆ ಸಂಬಂಧಿಸಿದ ನೀತಿ ಜಾರಿಯ ಬಗ್ಗೆ ಸೇನೆ ಆಸಕ್ತಿವಹಿಸಿದೆ‘ ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ, ನೀತಿ ಕುರಿತು ಈ ಅಂಶಗಳು ಚರ್ಚೆಗೆ ಬಂದಿವೆ.</p>.<p>‘ಶರಣಾಗತಿ ನೀತಿಗೆ ಸಂಬಂಧಿಸಿದಂತೆ ಸೇನೆ ಮತ್ತು ಪೊಲೀಸರು ಕೆಲವೊಂದು ಶಿಫಾರಸುಗಳನ್ನು ಕಳಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಕರಡು ನೀತಿ ಇನ್ನೂ ಅಂತಿಮಗೊಂಡಿಲ್ಲ. ಹೊಸ ಪಾಲಿಸಿ ಬರುವವರೆಗೂ, ನಾವು ಹಳೆಯದನ್ನೇ ಅನುಸರಿಸುತ್ತೇವೆ‘ ಎಂದು ಸೇನೆ ಶಾಹಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಹಿಂಸೆಯ ಹಾದಿ ತ್ಯಜಿಸಿ ಶರಣಾಗುವ ಭಯೋತ್ಪಾದಕರಿಗೆ ಪುನವರ್ಸತಿ ಕಲ್ಪಿಸುವ ಕೇಂದ್ರ ಸರ್ಕಾರದ ‘ಶರಣಾಗತಿ-ಪುನರ್ವಸತಿ ನೀತಿ‘ ಅಂತಿಮ ಹಂತದಲ್ಲಿದ್ದು, ಪ್ರಸ್ತುತ ಈ ವಿಷಯದ ಕುರಿತು ರಕ್ಷಣೆ ಮತ್ತು ಗೃಹ ಸಚಿವಾಲಯಗಳು ಚರ್ಚೆ ನಡೆಸುತ್ತಿರುವುದಾಗಿ ಉನ್ನತ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.</p>.<p>ಈ ನೀತಿಗೆ ಸಂಬಂಧಿಸಿದಂತೆ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕೇಂದ್ರಕ್ಕೆ ಶಿಫಾಸುಗಳನ್ನು ಕಳುಹಿಸಿದ್ದಾರೆ. ಶೀಘ್ರದಲ್ಲೇ ಹೊಸ ಶರಣಾಗತಿ ನೀತಿ ಜಾರಿಯಾಗುವ ಎಲ್ಲ ಸಾಧ್ಯತೆಗಳಿವೆ.</p>.<p>‘ಭಯೋತ್ಪಾದನೆ ಬಿಟ್ಟು ಮುಖ್ಯವಾಹಿನಿಗೆ ಮರಳುವ ಉಗ್ರರಿಗೆ ಭದ್ರತೆ ಒದಗಿಸುವ ಜತೆಗೆ ಅವರು ಸಂತೋಷದಿಂದ ಜೀವನ ನಡೆಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವುದು ಹೊಸ ನೀತಿಯ ಮೂಲ ಉದ್ದೇಶವಾಗಿದೆ. ಈ ನೀತಿಯು ಶರಣಾಗುವ ಸ್ಥಳೀಯ ಉಗ್ರರ ವಿರುದ್ಧ ವಿಚಾರಣೆ ನಡೆಸದೇ, ಕ್ಷಮಾದಾನ ನೀಡುವುದು ಹಾಗೂ ಶರಣಾದವರಿಗೆ ಉದ್ಯೋಗ ನೀಡಲು, ಅವರ ಹಿಂದಿನ ಚಟುವಟಿಕೆಗಳು ಅಡ್ಡಿಯಾಗದಂತೆ ಮಾಡುವುದು ಈ ನೀತಿಯ ಉದ್ದೇಶವಾಗಿದೆ‘ ಎಂದು ಮೂಲಗಳು ತಿಳಿಸಿವೆ.</p>.<p>ಶ್ರೀನಗರದ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಅವರು ‘ಸರ್ಕಾರ ಈ ಹೊಸ ನೀತಿಯನ್ನು ಪರಿಶೀಲಿಸುತ್ತಿದೆ. ಈ ನೀತಿಯಲ್ಲಿ ಅನೇಕ ಸಮಸ್ಯೆಗಳಿವೆ‘ ಎಂದು ಹೇಳಿದ್ದಾರೆ. ‘ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಹೊರಗಿನಿಂದ ಪಡೆಗಳನ್ನು ಬಳಸದಂತೆ‘ ಅವರು ನಿರ್ದೇಶಿಸಿದ್ದಾರೆ.</p>.<p>‘ಕೃತ್ಯದಲ್ಲಿ ಸ್ಥಳೀಯ ಉಗ್ರಗಾಮಿಗಳು ಭಾಗಿಯಾಗಿದ್ದರೆ, ಮೊದಲಿಗೆ ಅವರನ್ನು ಶರಣಾಗತಿಯಾಗಲು ತಿಳಿಸುತ್ತೇವೆ. ಯಾವುದೋ ಕಾರಣಕ್ಕೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ನಿಂತು ಫೋಟೊ ತೆಗೆಸಿಕೊಂಡಿದ್ದಾನೆಂದರೆ, ಆತ ಸಾಯಬೇಕೆಂದು ಅರ್ಥವಲ್ಲ‘ ಎಂದು ಅಧಿಕಾರಿ ಹೇಳಿದರು.</p>.<p>ಉತ್ತರ ಕಾಶ್ಮೀರ ಮೂಲದ ಜಿಒಸಿ ಕಿಲೊ ಫೋರ್ಸ್, ಮೇಜರ್ ಜನರಲ್ ಫೋರ್ಸ್ ಎಚ್.ಎಸ್.ಶಾಹಿ ಅವರು ಗುರುವಾರ, ‘ಉಗ್ರಗಾಮಿಗಳ ಶರಣಾಗತಿ ಮತ್ತು ಪುನವರ್ಸತಿಗೆ ಸಂಬಂಧಿಸಿದ ನೀತಿ ಜಾರಿಯ ಬಗ್ಗೆ ಸೇನೆ ಆಸಕ್ತಿವಹಿಸಿದೆ‘ ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ, ನೀತಿ ಕುರಿತು ಈ ಅಂಶಗಳು ಚರ್ಚೆಗೆ ಬಂದಿವೆ.</p>.<p>‘ಶರಣಾಗತಿ ನೀತಿಗೆ ಸಂಬಂಧಿಸಿದಂತೆ ಸೇನೆ ಮತ್ತು ಪೊಲೀಸರು ಕೆಲವೊಂದು ಶಿಫಾರಸುಗಳನ್ನು ಕಳಿಸಿದ್ದಾರೆ. ಆದರೆ, ಇಲ್ಲಿಯವರೆಗೂ ಕರಡು ನೀತಿ ಇನ್ನೂ ಅಂತಿಮಗೊಂಡಿಲ್ಲ. ಹೊಸ ಪಾಲಿಸಿ ಬರುವವರೆಗೂ, ನಾವು ಹಳೆಯದನ್ನೇ ಅನುಸರಿಸುತ್ತೇವೆ‘ ಎಂದು ಸೇನೆ ಶಾಹಿ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>