ಬಿಜೆಪಿ ನೇತೃತ್ವದ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನು ಪರಿಚಯಿಸಿರುವ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನಿತಿನ್, ‘ಜನಸಂಖ್ಯಾ ನಿಯಂತ್ರಣ ಕುರಿತು ಬೇರೆ ಬೇರೆ ರಾಜ್ಯಗಳು ಹೊಸ ಕಾನೂನುಗಳನ್ನು ತರುತ್ತಿವೆ. ಅವುಗಳನ್ನು ಸರ್ಕಾರ ಮೊದಲು ಅಧ್ಯಯನ ನಡೆಸಲಿದೆ. ನಂತರ ಅಗತ್ಯವಿದ್ದರೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.