ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಒಂದು ಹೆಣ್ಣು ಸಿಂಹ, ನಾಲ್ಕು ಕೃಷ್ಣಮೃಗಗಳ ಕಳೇಬರ ಪತ್ತೆ

Last Updated 22 ಮೇ 2021, 9:56 IST
ಅಕ್ಷರ ಗಾತ್ರ

ಅಹಮದಾಬಾದ್‌: ‘ಗುಜರಾತ್‌ನ ಜುನಾಗಢ ಜಿಲ್ಲೆಯ ಗಿರ್‌ ಅರಣ್ಯ ಪ್ರದೇಶದ ವಿಸಾವದರ್‌ ಸಮೀಪದ ಅಣೆಕಟ್ಟೆ ಬಳಿ ಒಂದು ಹೆಣ್ಣು ಸಿಂಹ ಮತ್ತು ನಾಲ್ಕು ಕೃಷ್ಣಮೃಗಗಳ ಕಳೇಬರ ಪತ್ತೆಯಾಗಿವೆ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

‘ವಿಸಾವದರ್‌ ಅರಣ್ಯ ಪ್ರದೇಶದಲ್ಲಿರುವ ವೆಕಾರಿಯಾ ಗ್ರಾಮದ ಬಳಿ ಅಣೆಕಟ್ಟೆ ಇದೆ. ಈ ಅಣೆಕಟ್ಟೆ ಬಳಿ ಈ ಕಾಡುಪ್ರಾಣಿಗಳ ಕಳೇಬರ ಪತ್ತೆಯಾಗಿವೆ. ಪ್ರಾಣಿಗಳ ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಜುನಾಗಢ ಅರಣ್ಯದ ಮುಖ್ಯ ಸಂರಕ್ಷಣಾಧಿಕಾರಿ ದುಶ್ಯಂತ್ ವಸವಾಡ ಮಾಹಿತಿ ನೀಡಿದರು.

‘ಗಿರ್‌ ಅರಣ್ಯ ಪ್ರದೇಶವು ಚಂಡಮಾರುತ ಪೀಡಿತ ಪ್ರದೇಶಗಳಳಲ್ಲಿ ಒಂದಾಗಿದೆ. 5 ರಿಂದ 9 ವರ್ಷದ ಹೆಣ್ಣು ಸಿಂಹ ನೀರಿನಲ್ಲಿ ಮುಳುಗಿ ಸಾವಿಗೀಡಾರಬಹುದು. ಆದರೆ ಇದಕ್ಕೂ ತೌತೆ ಚಂಡಮಾರುತಕ್ಕೂ ಯಾವುದೇ ಸಂಬಂಧವಿದ್ದಂತೆ ಕಾಣುತ್ತಿಲ್ಲ. ಕೃಷ್ಣ ಮೃಗಗಳನ್ನು ಬೆನ್ನಟ್ಟಿದ್ದ ಸಂದರ್ಭದಲ್ಲಿ ಹೆಣ್ಣುಸಿಂಹ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು’ ಎಂದು ಅಧಿಕಾರಿಗಳು ತಿಳಿಸಿದರು.

ಮೇ 16ರಂದು ಭಾವನಗರ ಜಿಲ್ಲೆಯ ವಡಾಲ್‌ ಪ್ರಾಣಿ ಆರೈಕೆ ಕೇಂದ್ರಕ್ಕೆ ಕರೆತರಲಾಗಿದ್ದ ಚಿರತೆಯೊಂದು ಮೃತಪಟ್ಟಿರುವುದು ಶನಿವಾರ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT