<p class="title"><strong>ನವದೆಹಲಿ</strong>: ಅಂಗವಿಕಲ ಬಾಲಕನಿಗೆ ‘ಇಂಡಿಗೊ’ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿರುವುದಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.</p>.<p class="title">ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇಂತಹ ವರ್ತನೆ ಸಹಿಸಲಾಗದು. ಯಾರಿಗೂ ಈ ಪರಿಸ್ಥಿತಿ ಎದುರಾಗಬಾರದು. ತನಿಖೆಯನ್ನು ಖುದ್ದು ಪರಿಶೀಲಿಸುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.</p>.<p class="title">ಶನಿವಾರ ರಾಂಚಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಿಸಿದ ಘಟನೆಯ ವಿಡಿಯೊ ಅನ್ನು ಸಹ ಪ್ರಯಾಣಿಕಮನಿಶಾ ಗುಪ್ತಾ ‘ಲಿಂಕ್ಡ್ ಇನ್’ ಜಾಲತಾಣದಲ್ಲಿ ಭಾನುವಾರ ಹಂಚಿಕೊಂಡಿದ್ದರು.</p>.<p class="title">ಇಂಡಿಗೊ ವಿಮಾನ ಸಿಬ್ಬಂದಿ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದರಿಂದ ಆತನ ತಂದೆ–ತಾಯಿ ಸಹ ಹೈದರಾಬಾದ್ಗೆ ಆ ವಿಮಾನದಲ್ಲಿ ಪ್ರಯಾಣಿಸುವುದನ್ನು ಕೈಬಿಡಬೇಕಾಯಿತು.</p>.<p>‘ವಿಮಾನ ಪ್ರವೇಶಿಸುವಾಗ ಬಾಲಕ ಹೆಚ್ಚು ದಿಗಿಲುಗೊಂಡಿದ್ದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗಬಹುದೆಂದು ಬಾಲಕನಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ’ ಎಂದು ಸಿಬ್ಬಂದಿ ಪ್ರಕಟಿಸಿದ್ದರು.</p>.<p>ಆದರೆ, ಇದನ್ನು ಸಹ ಪ್ರಯಾಣಿಕರು ವಿರೋಧಿಸಿ, ಬಾಲಕ ಹಾಗೂ ಆತನ ಪೋಷಕರಿಗೆ ವಿಮಾನದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.</p>.<p><strong>ತನಿಖೆಗೆ ತ್ರಿಸದಸ್ಯ ತಂಡ ರಚನೆ:</strong> ಪ್ರಕರಣದ ಸತ್ಯಾಸತ್ಯೆಯ ಕುರಿತು ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಡಿಜಿಸಿಎ ಸೋಮವಾರ ತ್ರಿಸದಸ್ಯರ ತಂಡ ರಚಿಸಿದೆ.</p>.<p>ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್, ಈ ಘಟನೆಗೆ ಸಂಬಂಧಿಸಿ ವರದಿ ಸಲ್ಲಿಸುವಂತೆಇಂಡಿಗೊ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ತಂಡವು ರಾಂಚಿ ಮತ್ತು ಹೈದರಾಬಾದ್ಗೆ ತೆರಳಿ ವಾರದೊಳಗೆ ಸಾಕ್ಷ್ಯ ಸಂಗ್ರಹಿಸಲಿದೆ. ಬಳಿಕ ಮಂದಿನ ಕ್ರಮ ಕೈಗೊಳ್ಳಲಾಗುವುದು’ಎಂದೂ ಹೇಳಿದ್ದಾರೆ.</p>.<p><strong>ವಿಷಾದ:</strong>ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಿಸಿರುವುದಕ್ಕೆ ಇಂಡಿಗೊ ವಿಮಾನ ಸಂಸ್ಥೆಯ ಸಿಇಒ ರಣಜಾಯ್ ದತ್ತಾ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ‘ಕಠಿಣ ಪರಿಸ್ಥಿತಿಯಲ್ಲಿ ಸಿಬ್ಬಂದಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ದತ್ತಾ ಹೇಳಿದ್ದಾರೆ.</p>.<p>‘ಬಾಲಕನ ಆರೈಕೆ ಕುರಿತು ಪೋಷಕರ ಬದ್ಧತೆ ಶ್ಲಾಘನೀಯ. ಬಾಲಕನಿಗೆ ವಿದ್ಯುತ್ ಚಾಲಿತ ವ್ಹೀಲ್ ಚೇರ್ ಕೊಡುಗೆ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.</p>.<p><strong>ಎಫ್ಐಆರ್ ದಾಖಲಿಸಲು ಸೂಚನೆ:</strong> ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗದ (ಎನ್ಸಿಪಿಸಿಆರ್)<br />ಅಧ್ಯಕ್ಷ ಪ್ರಿಯಾಂಕ್ ಕನೂಂಗೊ, ಇದುಅಂಗವಿಕಲರ ಹಕ್ಕುಗಳ ಕಾಯ್ದೆಯ ಸೆಕ್ಷನ್ 7ರ ಪ್ರಾಥಮಿಕ ಉಲ್ಲಂಘನೆ. ಇಂಡಿಗೊ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜಾರ್ಖಂಡ್ ಪೊಲೀಸರಿಗೆ ಸೂಚಿಸಿದ್ದಾರೆ.</p>.<p>ಡಿಜಿಸಿಎ ಈ ಬಗ್ಗೆ ತನಿಖೆ ನಡೆಸಿ, ಇಂಡಿಗೊ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಅಂಗವಿಕಲ ಬಾಲಕನಿಗೆ ‘ಇಂಡಿಗೊ’ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿರುವುದಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.</p>.<p class="title">ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇಂತಹ ವರ್ತನೆ ಸಹಿಸಲಾಗದು. ಯಾರಿಗೂ ಈ ಪರಿಸ್ಥಿತಿ ಎದುರಾಗಬಾರದು. ತನಿಖೆಯನ್ನು ಖುದ್ದು ಪರಿಶೀಲಿಸುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.</p>.<p class="title">ಶನಿವಾರ ರಾಂಚಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಿಸಿದ ಘಟನೆಯ ವಿಡಿಯೊ ಅನ್ನು ಸಹ ಪ್ರಯಾಣಿಕಮನಿಶಾ ಗುಪ್ತಾ ‘ಲಿಂಕ್ಡ್ ಇನ್’ ಜಾಲತಾಣದಲ್ಲಿ ಭಾನುವಾರ ಹಂಚಿಕೊಂಡಿದ್ದರು.</p>.<p class="title">ಇಂಡಿಗೊ ವಿಮಾನ ಸಿಬ್ಬಂದಿ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದರಿಂದ ಆತನ ತಂದೆ–ತಾಯಿ ಸಹ ಹೈದರಾಬಾದ್ಗೆ ಆ ವಿಮಾನದಲ್ಲಿ ಪ್ರಯಾಣಿಸುವುದನ್ನು ಕೈಬಿಡಬೇಕಾಯಿತು.</p>.<p>‘ವಿಮಾನ ಪ್ರವೇಶಿಸುವಾಗ ಬಾಲಕ ಹೆಚ್ಚು ದಿಗಿಲುಗೊಂಡಿದ್ದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗಬಹುದೆಂದು ಬಾಲಕನಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ’ ಎಂದು ಸಿಬ್ಬಂದಿ ಪ್ರಕಟಿಸಿದ್ದರು.</p>.<p>ಆದರೆ, ಇದನ್ನು ಸಹ ಪ್ರಯಾಣಿಕರು ವಿರೋಧಿಸಿ, ಬಾಲಕ ಹಾಗೂ ಆತನ ಪೋಷಕರಿಗೆ ವಿಮಾನದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.</p>.<p><strong>ತನಿಖೆಗೆ ತ್ರಿಸದಸ್ಯ ತಂಡ ರಚನೆ:</strong> ಪ್ರಕರಣದ ಸತ್ಯಾಸತ್ಯೆಯ ಕುರಿತು ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಡಿಜಿಸಿಎ ಸೋಮವಾರ ತ್ರಿಸದಸ್ಯರ ತಂಡ ರಚಿಸಿದೆ.</p>.<p>ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್, ಈ ಘಟನೆಗೆ ಸಂಬಂಧಿಸಿ ವರದಿ ಸಲ್ಲಿಸುವಂತೆಇಂಡಿಗೊ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ತಂಡವು ರಾಂಚಿ ಮತ್ತು ಹೈದರಾಬಾದ್ಗೆ ತೆರಳಿ ವಾರದೊಳಗೆ ಸಾಕ್ಷ್ಯ ಸಂಗ್ರಹಿಸಲಿದೆ. ಬಳಿಕ ಮಂದಿನ ಕ್ರಮ ಕೈಗೊಳ್ಳಲಾಗುವುದು’ಎಂದೂ ಹೇಳಿದ್ದಾರೆ.</p>.<p><strong>ವಿಷಾದ:</strong>ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಿಸಿರುವುದಕ್ಕೆ ಇಂಡಿಗೊ ವಿಮಾನ ಸಂಸ್ಥೆಯ ಸಿಇಒ ರಣಜಾಯ್ ದತ್ತಾ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ‘ಕಠಿಣ ಪರಿಸ್ಥಿತಿಯಲ್ಲಿ ಸಿಬ್ಬಂದಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ದತ್ತಾ ಹೇಳಿದ್ದಾರೆ.</p>.<p>‘ಬಾಲಕನ ಆರೈಕೆ ಕುರಿತು ಪೋಷಕರ ಬದ್ಧತೆ ಶ್ಲಾಘನೀಯ. ಬಾಲಕನಿಗೆ ವಿದ್ಯುತ್ ಚಾಲಿತ ವ್ಹೀಲ್ ಚೇರ್ ಕೊಡುಗೆ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.</p>.<p><strong>ಎಫ್ಐಆರ್ ದಾಖಲಿಸಲು ಸೂಚನೆ:</strong> ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗದ (ಎನ್ಸಿಪಿಸಿಆರ್)<br />ಅಧ್ಯಕ್ಷ ಪ್ರಿಯಾಂಕ್ ಕನೂಂಗೊ, ಇದುಅಂಗವಿಕಲರ ಹಕ್ಕುಗಳ ಕಾಯ್ದೆಯ ಸೆಕ್ಷನ್ 7ರ ಪ್ರಾಥಮಿಕ ಉಲ್ಲಂಘನೆ. ಇಂಡಿಗೊ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜಾರ್ಖಂಡ್ ಪೊಲೀಸರಿಗೆ ಸೂಚಿಸಿದ್ದಾರೆ.</p>.<p>ಡಿಜಿಸಿಎ ಈ ಬಗ್ಗೆ ತನಿಖೆ ನಡೆಸಿ, ಇಂಡಿಗೊ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>