ಈ ವಾರದ ಆರಂಭದಲ್ಲಿ ಕೇಂದ್ರ ಗುಜರಾತ್ನ ದಾಹೋಡ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜತೆ ಕೊನೆ ಬಾರಿಗೆ ಕಾಣಿಸಿಕೊಂಡಿದ್ದಪಾಟೀದಾರ್ ನಾಯಕ ಹಾರ್ದಿಕ್, ‘ಪಕ್ಷದವರೇ ನನ್ನನ್ನು ನಿರ್ಲಕ್ಷಿಸಿ, ಮೂಲೆಗುಂಪು ಮಾಡುತ್ತಿದ್ದಾರೆ’ ಎಂದು ಬಹಿರಂಗವಾಗಿ ಟೀಕಿಸಿದ್ದಾರೆ. ರಾಹುಲ್ ಗಾಂಧಿಯವರಿಂದ ‘ತೇಜೋವಧೆ’ಗೆ ಒಳಗಾದ ನಂತರ ಹಾರ್ದಿಕ್ ಪಕ್ಷ ತೊರೆಯುವ ಮನಸು ಮಾಡಿದ್ದಾರೆ ಎನ್ನಲಾಗಿದೆ.