ಮುದ್ರಣಾಲಯದ ಮಾಲೀಕರ ಪ್ರಕಾರ, ಇತ್ತೀಚೆಗೆ ಬಹಳಷ್ಟು ರೈತರ ಕುಟುಂಬಗಳು ಮತ್ತು ಇತರೆ ಜನರು ಲಗ್ನ ಪತ್ರಿಕೆಗಳ ಮೇಲೆ ‘ರೈತರಿಲ್ಲದಿದ್ದರೆ ಆಹಾರವಿಲ್ಲ‘ ಎಂಬ ಘೋಷವಾಕ್ಯಗಳ ಜತೆಗೆ, ರೈತ ನಾಯಕ ಛೋಟು ರಾಮ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಫೋಟೊಗಳನ್ನು ಮುದ್ರಿಸಿಕೊಡುವಂತೆ ಬೇಡಿಕೆ ಇಡುತ್ತಿದ್ದಾರಂತೆ.