ವಾಜೆ ಪರ ವಕೀಲರಾದ ಸುದೀಪ್ ಪಾಸ್ಬೋಲಾ ಮತ್ತು ರೌನಕ್ ನಾಯಕ್ ಅವರು, ವಾಜೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ನವಿ ಮುಂಬೈನ ತಾಲೋಜಾ ಜೈಲಿನಲ್ಲಿರಿಸಲಾಗಿದೆ. ಜೈಲಿನ ಆಸ್ಪತ್ರೆಯು ಕಳಪೆ ಸ್ಥಿತಿಯಲ್ಲಿದ್ದು, ಸುಸಜ್ಜಿತವಾಗಿಲ್ಲ. ಅಲ್ಲಿ ವಾಜೆ ಅವರಿಗೆ ಸೋಂಕು ತಗಲುವ ಅಪಾಯವಿದೆ ಎಂದು ವಾದ ಮಂಡಿಸಿದ್ದರು.