<p><strong>ಶಿಮ್ಲಾ: </strong>ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಕಾಣೆಯಾಗಿದ್ದಾರೆ.</p>.<p>ಕುಲು ಜಿಲ್ಲೆಯಲ್ಲಿ ಇಬ್ಬರು, ಚಂಬಾದಲ್ಲಿ ಮತ್ತು ಲಾಹುಲ್-ಸ್ಪಿತಿ ಕಣಿವೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾಮಾಹಿತಿ ನೀಡಿದ್ದಾರೆ.</p>.<p>ಕುಲು ಭಾಗದಲ್ಲಿ ಬುಧವಾರ ಬೆಳಿಗ್ಗೆ 6.15ರ ಸುಮಾರಿಗೆ ಮಣಿಕರಣ್ ಭಾಗದಲ್ಲಿರುವ ಪಾರ್ವತಿ ನದಿಯ ಉಪನದಿ ಬ್ರಹ್ಮಗಂಗಾದಲ್ಲಿ ಪೂನಂ(25) ಎಂಬ ಮಹಿಳೆ ಮತ್ತು ಆಕೆಯ ಪುತ್ರ ನಿಕುಂಜ್(4) ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ ಎಂದು ಮೊಕ್ತಾ ತಿಳಿಸಿದ್ದಾರೆ.</p>.<p><a href="https://www.prajavani.net/india-news/jammu-and-kashmir-cloud-burst-kisthwar-district-852426.html" itemprop="url">ಜಮ್ಮುವಿನ ಕಿಶ್ತವಾರ್ನಲ್ಲಿ ಮೇಘ ಸ್ಫೋಟ: ಐವರ ಸಾವು, 25 ಮಂದಿ ನಾಪತ್ತೆ </a></p>.<p>ಲಾಹುಲ್ ಭಾಗದಲ್ಲಿರುವ ಉದಯ್ಪುರದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಯಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಜೆಸಿಬಿ ಹಾಗೂ ಕಾರ್ಮಿಕರಎರಡು ಟೆಂಟ್ಗಳು ಕೊಚ್ಚಿ ಹೋಗಿವೆ. ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಜಮ್ಮು ಮತ್ತು ಕಾಶ್ಮೀರದ ಅಲ್ತಾಫ್(19) ಎಂದು ಗುರುತಿಸಲಾಗಿದೆ. ಇನ್ನೂ ಒಂಬತ್ತು ಕಾರ್ಮಿಕರು ಕಾಣೆಯಾಗಿದ್ದಾರೆ.</p>.<p>ಇಂಡೊ–ಟಿಬೆಟ್ ಬಾರ್ಡರ್ ಪೊಲೀಸ್ ತಂಡ ಬುಧವಾರ ಬೆಳಿಗ್ಗೆಯಿಂದಲೇ ಕಾಣೆಯಾದವರಿಗಾಗಿ ಶೋಧಕಾರ್ಯ ಆರಂಭಿಸಿದೆ ಎಂದು ಮೋಕ್ತಾ ತಿಳಿಸಿದ್ದಾರೆ.</p>.<p><a href="https://www.prajavani.net/india-news/uttar-pradesh-truck-accident-rammed-to-double-decker-bus-852427.html" itemprop="url">ಉತ್ತರ ಪ್ರದೇಶದಲ್ಲಿ ಬಸ್ಗೆ ಟ್ರಕ್ ಡಿಕ್ಕಿ: 18 ಸಾವು, 25 ಜನರಿಗೆ ಗಾಯ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ: </strong>ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಕಾಣೆಯಾಗಿದ್ದಾರೆ.</p>.<p>ಕುಲು ಜಿಲ್ಲೆಯಲ್ಲಿ ಇಬ್ಬರು, ಚಂಬಾದಲ್ಲಿ ಮತ್ತು ಲಾಹುಲ್-ಸ್ಪಿತಿ ಕಣಿವೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾಮಾಹಿತಿ ನೀಡಿದ್ದಾರೆ.</p>.<p>ಕುಲು ಭಾಗದಲ್ಲಿ ಬುಧವಾರ ಬೆಳಿಗ್ಗೆ 6.15ರ ಸುಮಾರಿಗೆ ಮಣಿಕರಣ್ ಭಾಗದಲ್ಲಿರುವ ಪಾರ್ವತಿ ನದಿಯ ಉಪನದಿ ಬ್ರಹ್ಮಗಂಗಾದಲ್ಲಿ ಪೂನಂ(25) ಎಂಬ ಮಹಿಳೆ ಮತ್ತು ಆಕೆಯ ಪುತ್ರ ನಿಕುಂಜ್(4) ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ ಎಂದು ಮೊಕ್ತಾ ತಿಳಿಸಿದ್ದಾರೆ.</p>.<p><a href="https://www.prajavani.net/india-news/jammu-and-kashmir-cloud-burst-kisthwar-district-852426.html" itemprop="url">ಜಮ್ಮುವಿನ ಕಿಶ್ತವಾರ್ನಲ್ಲಿ ಮೇಘ ಸ್ಫೋಟ: ಐವರ ಸಾವು, 25 ಮಂದಿ ನಾಪತ್ತೆ </a></p>.<p>ಲಾಹುಲ್ ಭಾಗದಲ್ಲಿರುವ ಉದಯ್ಪುರದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಯಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಜೆಸಿಬಿ ಹಾಗೂ ಕಾರ್ಮಿಕರಎರಡು ಟೆಂಟ್ಗಳು ಕೊಚ್ಚಿ ಹೋಗಿವೆ. ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಜಮ್ಮು ಮತ್ತು ಕಾಶ್ಮೀರದ ಅಲ್ತಾಫ್(19) ಎಂದು ಗುರುತಿಸಲಾಗಿದೆ. ಇನ್ನೂ ಒಂಬತ್ತು ಕಾರ್ಮಿಕರು ಕಾಣೆಯಾಗಿದ್ದಾರೆ.</p>.<p>ಇಂಡೊ–ಟಿಬೆಟ್ ಬಾರ್ಡರ್ ಪೊಲೀಸ್ ತಂಡ ಬುಧವಾರ ಬೆಳಿಗ್ಗೆಯಿಂದಲೇ ಕಾಣೆಯಾದವರಿಗಾಗಿ ಶೋಧಕಾರ್ಯ ಆರಂಭಿಸಿದೆ ಎಂದು ಮೋಕ್ತಾ ತಿಳಿಸಿದ್ದಾರೆ.</p>.<p><a href="https://www.prajavani.net/india-news/uttar-pradesh-truck-accident-rammed-to-double-decker-bus-852427.html" itemprop="url">ಉತ್ತರ ಪ್ರದೇಶದಲ್ಲಿ ಬಸ್ಗೆ ಟ್ರಕ್ ಡಿಕ್ಕಿ: 18 ಸಾವು, 25 ಜನರಿಗೆ ಗಾಯ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>