<p><strong>ನಾಗ್ಪುರ: 'ವಿ</strong>ವಿಧತೆ ಎಂಬುದು ಏಕತೆಯ ಬಹುಮುಖ ಅಭಿವ್ಯಕ್ತಿ' ಎಂದು ಅರ್ಥಮಾಡಿಕೊಳ್ಳುವವನೇ ನಿಜವಾದ ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ.</p>.<p>ಆರ್ಎಸ್ಎಸ್ನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ‘ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಒದಗಿರುವುದು ಸಾಮಾನ್ಯ ಸಾಧನೆಯಲ್ಲ‘ ಎಂದು ಅಭಿಪ್ರಾಯಪಟ್ಟರು.</p>.<p>‘ಸಂಪ್ರದಾಯಬದ್ಧವಾಗಿ ಭಾರತದ ನಿವಾಸಿಯಾಗಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಭಾರತಕ್ಕೆ ಉತ್ತರದಾಯಿಯಾಗಿರುವವನೇ ಹಿಂದೂ. ನಾವು ವೈವಿಧ್ಯತೆಯೊಂದಿಗೆ ಬದುಕಬಹುದು, ಎಲ್ಲಾ ವೈವಿಧ್ಯಗಳು ಒಟ್ಟಿಗೆ ನಡೆಯಬಹುದು, ಏಕೆಂದರೆ ವೈವಿಧ್ಯಗಳು ಏಕತೆಯ ಬಹು ಅಭಿವ್ಯಕ್ತಿಗಳಾಗಿವೆ. ಇದನ್ನು ಅರ್ಥ ಮಾಡಿಕೊಳ್ಳುವವನೇ ಹಿಂದೂ’ ಎಂದು ಹೇಳಿದರು.</p>.<p>ಇಂದೂ ಕೂಡ ಕ್ರೂರ ಶಕ್ತಿಗಳು ಮತ್ತು ಅವರ ಏಜೆಂಟರು ಭಾರತ ಒಡೆಯುವುದನ್ನು ನಿರೀಕ್ಷೆ ಮಾಡುತ್ತಿವೆ. ಅಭಿವೃದ್ಧಿಯಾಗದಂತೆ ಮಾಡಲು ಹವಣಿಸುತ್ತಿವೆ ಎಂದು ಅವರು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ: 'ವಿ</strong>ವಿಧತೆ ಎಂಬುದು ಏಕತೆಯ ಬಹುಮುಖ ಅಭಿವ್ಯಕ್ತಿ' ಎಂದು ಅರ್ಥಮಾಡಿಕೊಳ್ಳುವವನೇ ನಿಜವಾದ ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ.</p>.<p>ಆರ್ಎಸ್ಎಸ್ನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ‘ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಒದಗಿರುವುದು ಸಾಮಾನ್ಯ ಸಾಧನೆಯಲ್ಲ‘ ಎಂದು ಅಭಿಪ್ರಾಯಪಟ್ಟರು.</p>.<p>‘ಸಂಪ್ರದಾಯಬದ್ಧವಾಗಿ ಭಾರತದ ನಿವಾಸಿಯಾಗಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಭಾರತಕ್ಕೆ ಉತ್ತರದಾಯಿಯಾಗಿರುವವನೇ ಹಿಂದೂ. ನಾವು ವೈವಿಧ್ಯತೆಯೊಂದಿಗೆ ಬದುಕಬಹುದು, ಎಲ್ಲಾ ವೈವಿಧ್ಯಗಳು ಒಟ್ಟಿಗೆ ನಡೆಯಬಹುದು, ಏಕೆಂದರೆ ವೈವಿಧ್ಯಗಳು ಏಕತೆಯ ಬಹು ಅಭಿವ್ಯಕ್ತಿಗಳಾಗಿವೆ. ಇದನ್ನು ಅರ್ಥ ಮಾಡಿಕೊಳ್ಳುವವನೇ ಹಿಂದೂ’ ಎಂದು ಹೇಳಿದರು.</p>.<p>ಇಂದೂ ಕೂಡ ಕ್ರೂರ ಶಕ್ತಿಗಳು ಮತ್ತು ಅವರ ಏಜೆಂಟರು ಭಾರತ ಒಡೆಯುವುದನ್ನು ನಿರೀಕ್ಷೆ ಮಾಡುತ್ತಿವೆ. ಅಭಿವೃದ್ಧಿಯಾಗದಂತೆ ಮಾಡಲು ಹವಣಿಸುತ್ತಿವೆ ಎಂದು ಅವರು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>