ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮ್‌ನಗರ: ಹಿಂದೂ ಸೇನಾದಿಂದ ಗೋಡ್ಸೆ ಪುತ್ಥಳಿ ಸ್ಥಾಪನೆ; ಕಾಂಗ್ರೆಸ್‌ನಿಂದ ಧ್ವಂಸ

Last Updated 16 ನವೆಂಬರ್ 2021, 11:20 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಜಾಮ್‌ನಗರದ ದೇವಸ್ಥಾನವೊಂದರ ಆವರಣದಲ್ಲಿ ಹಿಂದೂ ಸೇನಾ ಸಂಘಟನೆಯ ಕಾರ್ಯಕರ್ತರು ಸ್ಥಾಪಿಸಿದ್ದ ನಾಥೂರಾಮ್‌ ಗೋಡ್ಸೆ ‍ಪುತ್ಥಳಿಯನ್ನು ಕಾಂಗ್ರೆಸ್‌ ಮುಖಂಡರು ಮಂಗಳವಾರ ಧ್ವಂಸ ಮಾಡಿದ್ದಾರೆ.

‘ಇದು ಹಿಂದೂ ಸೇನಾ ಕಾರ್ಯಕರ್ತರು ಎಸಗಿರುವ ದೇಶದ್ರೋಹವಾಗಿದ್ದು, ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು’ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

‘ಬೆಂಬಲಿಗರೊಂದಿಗೆ ಹನುಮಾನ್ ಮಂದಿರಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿ, ಗೋಡ್ಸೆ ಪುತ್ಥಳಿಯನ್ನು ಧ್ವಂಸ ಮಾಡಲಾಯಿತು’ ಎಂದು ಕಾಂಗ್ರೆಸ್‌ನ ಜಾಮ್‌ನಗರ ಘಟಕದ ಅಧ್ಯಕ್ಷ ದಿಗುಭಾ ಜಡೇಜಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾತ್ಮ ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ಪುತ್ಥಳಿಯನ್ನು ಹಿಂದೂ ಸೇನಾ ಅಧ್ಯಕ್ಷ ಪ್ರತೀಕ್‌ ಭಟ್‌ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಹನುಮಾನ್‌ ಮಂದಿರದಲ್ಲಿ ಸೋಮವಾರ ಸ್ಥಾಪಿಸಿದ್ದರು. ಪುತ್ಥಳಿಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲಿಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT