ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುಣೆ ಡಿಸಿಪಿ ಅಮೋಲ್ ಜೇಂಡೆ ಅವರು, ಆರೋಪಿ ವಿರುದ್ಧ ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈತ ತನ್ನ ಅಣ್ಣನ ಜೊತೆ ತೆಲಂಗಾಣದಲ್ಲಿ ಆಸ್ತಿ ವಿವಾದ ಹೊಂದಿದ್ದಾನೆ. ಹೀಗಾಗಿ ಅಣ್ಣನಿಗೆ ತೊಂದರೆ ಕೊಡಲು ಹೀಗೆ ಮಾಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.