ಬೈಲಾ ಉಲ್ಲಂಘಿಸಿರುವ ಆಸ್ಪತ್ರೆಗಳಿಗೆ, ಅಗ್ನಿಶಾಮಕ ವ್ಯವಸ್ಥೆ ಮಾಡಿಕೊಳ್ಳಲು 2022ರ ಜುಲೈವರೆಗೆ ಅವಕಾಶ ನೀಡಿದ್ದಕ್ಕಾಗಿ ಗುಜರಾತ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ‘ನಿಯಮ ಉಲ್ಲಂಘಿಸುವವರಿಗೆ ನೀವು (ಗುಜರಾತ್ ಸರ್ಕಾರ) ಅವಕಾಶ ಕೊಡುತ್ತ ಹೋದರೆ, ಆ ಆಸ್ಪತ್ರೆಗಳು ಕ್ರಮಕೈಗೊಳ್ಳುವ ತನಕ, ರೋಗಿಗಳು ಸಾಯುತ್ತಲೇ ಇರುತ್ತಾರೆ’ ಎಂದು ನ್ಯಾಯಾಲಯ ಹೇಳಿದೆ.