ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ವಲಯದಲ್ಲಿ ಮಾನವ ಸಂಪನ್ಮೂಲವೇ ಅತಿದೊಡ್ಡ ಆಸ್ತಿ: ಜಮ್ಮು ಕಾಶ್ಮೀರ ಗವರ್ನರ್

Last Updated 12 ಸೆಪ್ಟೆಂಬರ್ 2021, 12:39 IST
ಅಕ್ಷರ ಗಾತ್ರ

ಶ್ರೀನಗರ: ಪ್ರತಿಭೆ, ಕೌಶಲ ಮತ್ತು ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಸೇವಾ ವಲಯದಲ್ಲಿನ ಅತಿ ದೊಡ್ಡ ಸಂಪತ್ತು ಎಂದು ಜಮ್ಮು-ಕಾಶ್ಮೀರ ಲೆಫ್ಟಿನಂಟ್‌ ಗವರ್ನರ್‌ಮನೋಜ್‌ ಸಿನ್ಹಾ ಹೇಳಿದ್ದಾರೆ.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ಎನ್‌ಎಎಸಿ), ʼಜಮ್ಮು ಕಾಶ್ಮೀರ ಮತ್ತು ಲಡಾಖ್- ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ವರದಿಗಳ ವಿಶ್ಲೇಷಣೆʼ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ʼಕೃಷಿ ಆರ್ಥಿಕತೆಯ ಬಗ್ಗೆ ಮಾತನಾಡುವುದಾದರೆ ನಾವು ಭೂಮಿಯನ್ನುಆಸ್ತಿಯಾಗಿಹೊಂದಿದ್ದೇವೆ. ಕೈಗಾರಿಕಾ ಆರ್ಥಿಕತೆಯಲ್ಲಿ ಕಾರ್ಮಿಕರ ಬಲವಿದೆ. ಅದೇ ರೀತಿ ಸೇವಾ ವಲಯದಲ್ಲಿನವೀನ ತಂತ್ರಜ್ಞಾನ ಮತ್ತುಪ್ರತಿಭೆ, ಕೌಶಲ, ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಅತಿ ದೊಡ್ಡ ಸಂಪತ್ತುʼ ಎಂದು ಮನೋಜ್‌ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ,ʼನಾವು ಅಭಿವೃದ್ಧಿಯ ಮಾದರಿ ರೂಪಿಸುವಾಗ ಮಾನವ ಸಂಪನ್ಮೂಲದ ಹೆಚ್ಚಳವನ್ನು ಜಾಗರೂಕವಾಗಿ ಖಾತ್ರಿಪಡಿಸಿಕೊಳ್ಳಬೇಕುʼ ಎಂದೂ ಕಿವಿಮಾತು ಹೇಳಿದ್ದಾರೆ.

ಮುಂದುವರಿದು,ʼನನ್ನ ಪ್ರಕಾರ, ಶಿಕ್ಷಣ ಕ್ಷೇತ್ರವು ದೇಶದ ಉಳಿದ ವಲಯಗಳೊಂದಿಗೆ ಸ್ಪರ್ಧಿಸಬೇಕುʼ

ʼಹೊಸ ಸಾಧ್ಯತೆಗಳು, ಆವಿಷ್ಕಾರ ಮತ್ತು ಕಮ್ಮಟಗಳಿಗೆ ಅನುವು ಮಾಡಿಕೊಡಲು ಟಾಟಾ ಗ್ರೂಪ್ಸ್‌ (ಭಾರತದ ಬಹುರಾಷ್ಟ್ರೀಯ ಕಂಪೆನಿ) ಜೊತೆಗೆ ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ ಹದಿನಾಲ್ಕು ಕೇಂದ್ರಗಳನ್ನು ತೆರೆಯಲಿದ್ದೇವೆʼ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ,3d ಪ್ರಿಂಟಿಂಗ್‌, ದತ್ತಾಂಶ ವಿಶ್ಲೇಷಣೆ, ಬಯೋಟೆಕ್‌ ಮತ್ತು ಇತರ ಕ್ಷೇತ್ರಗಳಿಗಾಗಿ ಸುಮಾರು₹ 200 ಕೋಟಿ ಹಂಚಿಕೆ ಮಾಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT