<p><strong>ಶ್ರೀನಗರ</strong>: ಪ್ರತಿಭೆ, ಕೌಶಲ ಮತ್ತು ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಸೇವಾ ವಲಯದಲ್ಲಿನ ಅತಿ ದೊಡ್ಡ ಸಂಪತ್ತು ಎಂದು ಜಮ್ಮು-ಕಾಶ್ಮೀರ ಲೆಫ್ಟಿನಂಟ್ ಗವರ್ನರ್ಮನೋಜ್ ಸಿನ್ಹಾ ಹೇಳಿದ್ದಾರೆ.</p>.<p>ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ಎನ್ಎಎಸಿ), ʼಜಮ್ಮು ಕಾಶ್ಮೀರ ಮತ್ತು ಲಡಾಖ್- ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ವರದಿಗಳ ವಿಶ್ಲೇಷಣೆʼ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.</p>.<p>ʼಕೃಷಿ ಆರ್ಥಿಕತೆಯ ಬಗ್ಗೆ ಮಾತನಾಡುವುದಾದರೆ ನಾವು ಭೂಮಿಯನ್ನುಆಸ್ತಿಯಾಗಿಹೊಂದಿದ್ದೇವೆ. ಕೈಗಾರಿಕಾ ಆರ್ಥಿಕತೆಯಲ್ಲಿ ಕಾರ್ಮಿಕರ ಬಲವಿದೆ. ಅದೇ ರೀತಿ ಸೇವಾ ವಲಯದಲ್ಲಿನವೀನ ತಂತ್ರಜ್ಞಾನ ಮತ್ತುಪ್ರತಿಭೆ, ಕೌಶಲ, ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಅತಿ ದೊಡ್ಡ ಸಂಪತ್ತುʼ ಎಂದು ಮನೋಜ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.</p>.<p>ಹಾಗೆಯೇ,ʼನಾವು ಅಭಿವೃದ್ಧಿಯ ಮಾದರಿ ರೂಪಿಸುವಾಗ ಮಾನವ ಸಂಪನ್ಮೂಲದ ಹೆಚ್ಚಳವನ್ನು ಜಾಗರೂಕವಾಗಿ ಖಾತ್ರಿಪಡಿಸಿಕೊಳ್ಳಬೇಕುʼ ಎಂದೂ ಕಿವಿಮಾತು ಹೇಳಿದ್ದಾರೆ.</p>.<p>ಮುಂದುವರಿದು,ʼನನ್ನ ಪ್ರಕಾರ, ಶಿಕ್ಷಣ ಕ್ಷೇತ್ರವು ದೇಶದ ಉಳಿದ ವಲಯಗಳೊಂದಿಗೆ ಸ್ಪರ್ಧಿಸಬೇಕುʼ</p>.<p>ʼಹೊಸ ಸಾಧ್ಯತೆಗಳು, ಆವಿಷ್ಕಾರ ಮತ್ತು ಕಮ್ಮಟಗಳಿಗೆ ಅನುವು ಮಾಡಿಕೊಡಲು ಟಾಟಾ ಗ್ರೂಪ್ಸ್ (ಭಾರತದ ಬಹುರಾಷ್ಟ್ರೀಯ ಕಂಪೆನಿ) ಜೊತೆಗೆ ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ ಹದಿನಾಲ್ಕು ಕೇಂದ್ರಗಳನ್ನು ತೆರೆಯಲಿದ್ದೇವೆʼ ಎಂದಿದ್ದಾರೆ.</p>.<p>ಜಮ್ಮು ಕಾಶ್ಮೀರದಲ್ಲಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ,3d ಪ್ರಿಂಟಿಂಗ್, ದತ್ತಾಂಶ ವಿಶ್ಲೇಷಣೆ, ಬಯೋಟೆಕ್ ಮತ್ತು ಇತರ ಕ್ಷೇತ್ರಗಳಿಗಾಗಿ ಸುಮಾರು₹ 200 ಕೋಟಿ ಹಂಚಿಕೆ ಮಾಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಪ್ರತಿಭೆ, ಕೌಶಲ ಮತ್ತು ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಸೇವಾ ವಲಯದಲ್ಲಿನ ಅತಿ ದೊಡ್ಡ ಸಂಪತ್ತು ಎಂದು ಜಮ್ಮು-ಕಾಶ್ಮೀರ ಲೆಫ್ಟಿನಂಟ್ ಗವರ್ನರ್ಮನೋಜ್ ಸಿನ್ಹಾ ಹೇಳಿದ್ದಾರೆ.</p>.<p>ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ಎನ್ಎಎಸಿ), ʼಜಮ್ಮು ಕಾಶ್ಮೀರ ಮತ್ತು ಲಡಾಖ್- ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ವರದಿಗಳ ವಿಶ್ಲೇಷಣೆʼ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.</p>.<p>ʼಕೃಷಿ ಆರ್ಥಿಕತೆಯ ಬಗ್ಗೆ ಮಾತನಾಡುವುದಾದರೆ ನಾವು ಭೂಮಿಯನ್ನುಆಸ್ತಿಯಾಗಿಹೊಂದಿದ್ದೇವೆ. ಕೈಗಾರಿಕಾ ಆರ್ಥಿಕತೆಯಲ್ಲಿ ಕಾರ್ಮಿಕರ ಬಲವಿದೆ. ಅದೇ ರೀತಿ ಸೇವಾ ವಲಯದಲ್ಲಿನವೀನ ತಂತ್ರಜ್ಞಾನ ಮತ್ತುಪ್ರತಿಭೆ, ಕೌಶಲ, ಸೃಜನಶೀಲತೆಯ ಸಂಯೋಜನೆಯನ್ನೊಳಗೊಂಡ ಮಾನವ ಸಂಪನ್ಮೂಲ ಅತಿ ದೊಡ್ಡ ಸಂಪತ್ತುʼ ಎಂದು ಮನೋಜ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.</p>.<p>ಹಾಗೆಯೇ,ʼನಾವು ಅಭಿವೃದ್ಧಿಯ ಮಾದರಿ ರೂಪಿಸುವಾಗ ಮಾನವ ಸಂಪನ್ಮೂಲದ ಹೆಚ್ಚಳವನ್ನು ಜಾಗರೂಕವಾಗಿ ಖಾತ್ರಿಪಡಿಸಿಕೊಳ್ಳಬೇಕುʼ ಎಂದೂ ಕಿವಿಮಾತು ಹೇಳಿದ್ದಾರೆ.</p>.<p>ಮುಂದುವರಿದು,ʼನನ್ನ ಪ್ರಕಾರ, ಶಿಕ್ಷಣ ಕ್ಷೇತ್ರವು ದೇಶದ ಉಳಿದ ವಲಯಗಳೊಂದಿಗೆ ಸ್ಪರ್ಧಿಸಬೇಕುʼ</p>.<p>ʼಹೊಸ ಸಾಧ್ಯತೆಗಳು, ಆವಿಷ್ಕಾರ ಮತ್ತು ಕಮ್ಮಟಗಳಿಗೆ ಅನುವು ಮಾಡಿಕೊಡಲು ಟಾಟಾ ಗ್ರೂಪ್ಸ್ (ಭಾರತದ ಬಹುರಾಷ್ಟ್ರೀಯ ಕಂಪೆನಿ) ಜೊತೆಗೆ ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅನುಮೋದನೆಯೊಂದಿಗೆ ಹದಿನಾಲ್ಕು ಕೇಂದ್ರಗಳನ್ನು ತೆರೆಯಲಿದ್ದೇವೆʼ ಎಂದಿದ್ದಾರೆ.</p>.<p>ಜಮ್ಮು ಕಾಶ್ಮೀರದಲ್ಲಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ,3d ಪ್ರಿಂಟಿಂಗ್, ದತ್ತಾಂಶ ವಿಶ್ಲೇಷಣೆ, ಬಯೋಟೆಕ್ ಮತ್ತು ಇತರ ಕ್ಷೇತ್ರಗಳಿಗಾಗಿ ಸುಮಾರು₹ 200 ಕೋಟಿ ಹಂಚಿಕೆ ಮಾಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>