ಡಾ. ರೆಡ್ಡೀಸ್ ಲ್ಯಾಬ್ ಸಹ-ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ.ವಿ ಪ್ರಸಾದ್ ಮತ್ತು ಇತರರೊಂದಿಗೆ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ದಲೈಲಾಮಾ,‘ಭಾರತವು ಅಹಿಂಸೆ ಮತ್ತು ಕರುಣೆಯ ತತ್ವವನ್ನು ಪಾಲಿಸುತ್ತದೆ. ನಾನು ಜನಿಸಿದ್ದು ಟಿಬೆಟ್ನಲ್ಲಾದರೂ, ಭಾರತ ನನ್ನ ಮನೆಯಾಗಿದೆ. ನನ್ನ ಜೀವನದ ಹೆಚ್ಚಿನ ಸಮಯವನ್ನು ನಾನು ಭಾರತದಲ್ಲಿ ಕಳೆದಿದ್ದೇನೆ. ನಾನು ಭಾರತ ಸರ್ಕಾರದ ಅತಿಥಿ ಎಂದು ಹೇಳಲು ಬಹಳ ಹೆಮ್ಮೆಯಾಗುತ್ತಿದೆ. ಬಹುಶಃ ನಾನು ಭಾರತದ ದೀರ್ಘ ಕಾಲದ ಅತಿಥಿಯಾಗಿದ್ದೇನೆ’ ಎಂದು ಅವರು ಹೇಳಿದರು.