ನವದೆಹಲಿ: ಉತ್ತರ ಪ್ರದೇಶದಲ್ಲಿ ತಮ್ಮ ವಾಹನದ ಮೇಲೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ಕೇಂದ್ರ ಸರ್ಕಾರವು ಒದಗಿಸಿರುವ 'ಝಡ್' ಶ್ರೇಣಿಯ ಭದ್ರತೆಯನ್ನು ತಿರಸ್ಕರಿಸಿರುವ ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್ ಮುಸ್ಲೀಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಮಗೆನ್ಯಾಯ ಒದಗಿಸಿ ಕೊಡಿ ಎಂದು ಲೋಕಸಭೆಯಲ್ಲಿ ವಿನಂತಿಸಿದ್ದಾರೆ.