‘ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಇಂದು ಶಕ್ತಿಶಾಲಿಯಾಗಿದ್ದು, ಯಾವುದೇ ದೇಶವೂ ಭಾರತದತ್ತ ತನ್ನ ದೃಷ್ಟಿ ಹಾಯಿಸುವ ಧೈರ್ಯ ಹೊಂದಿಲ್ಲ. ತಾಲಿಬಾನ್ನಿಂದ ಇಂದು ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಲ್ಲಣಗೊಂಡಿವೆ. ಒಂದು ವೇಳೆ ಭಾರತದ ತಂಟೆಗೆ ಹೋದರೆ ವೈಮಾನಿಕ ದಾಳಿಯೊಂದನ್ನು ಎದುರಿಸಬೇಕು ಎಂಬುದು ತಾಲಿಬಾನ್ಗೆ ತಿಳಿದಿದೆ’ ಎಂದು ಯೋಗಿ ಹೇಳಿದರು.