ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಮಲ್ನಾಥ್, ‘ಮೆಟ್ಟಿಲುಬಾವಿಯ ಮೇಲಿ ಅನಧಿಕೃತವಾಗಿ ಚಾವಣಿಯನ್ನು ನಿರ್ಮಿಸಲಾಗಿತ್ತು. ಈ ಕಾಮಗಾರಿಯು ಕಳಪೆಯಿಂದ ಕೂಡಿತ್ತು. ಆಡಳಿತಾರೂಢ ಬಿಜೆಪಿಯ ಒತ್ತಡದಿಂದಾಗಿ ಸ್ಥಳೀಯ ಪಾಲಿಕೆಯು ಈ ನಿರ್ಮಾಣವನ್ನು ಕೆಡವಲಿಲ್ಲ. ಏಳು ದಿನಗಳೊಳಗೆ ಮೆಟ್ಟಿಲು ಬಾವಿಯ ಮೇಲಿನ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸದಿದ್ದರೆ ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.