ದಿವಂಗತ ಡಿಜಿಎಸ್ ದಿನಕರನ್ ಅವರು ಸಂಸ್ಥೆಯನ್ನು ಸ್ಥಾಪಿಸಿದ್ದು, ಸದ್ಯ ಅವರ ಮಗ ಪಾಲ್ ದಿನಕರನ್ ನೋಡಿಕೊಳ್ಳುತ್ತಿದ್ದಾರೆ. ಚೆನ್ನೈನ ‘ಜೀಸಸ್ ಕಾಲ್ಸ್’ಗೆ ಸೇರಿದ ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ. ಇದರ ಜೊತೆಗೆ, ಕೊಯಮತ್ತೂರಿನಲ್ಲಿರುವ ದಿನಕರನ್ ಕುಟುಂಬ ನಡೆಸುತ್ತಿರುವ ಕಾರುಣ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸಸ್ ಮೇಲೂ ದಾಳಿ ನಡೆದಿದೆ.