ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಒಸಿ) ಕದನ ವಿರಾಮ ಉಲ್ಲಂಘನೆಯಾಗುತ್ತಿರುವ ವೇಳೆ ಕುಪ್ವಾರ ಜಿಲ್ಲೆಯ ಕೇರಣ್ ಸೆಕ್ಟರ್ನಲ್ಲಿ ಜನವರಿ 1ರಂದು ನುಸುಳುಕೋರ ಅಥವಾ ಪಾಕ್ ಸೇನೆಯ ಗಡಿ ಕಾರ್ಯಪಡೆಯ (ಬಿಎಟಿ) ಸಿಬ್ಬಂದಿ ಕಾಶ್ಮೀರದೊಳಗೆ ನುಸುಳಲು ಪ್ರಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ಕೈಗೊಂಡ ಸೇನೆಯು ನುಸುಳುಕೋರನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದ್ದಾರೆ.