‘ಕೋವಿಡ್–19 ರೋಗಿಯನ್ನು ಭೇಟಿಯಾಗಲು ಕುಟುಂಬದ ಆಪ್ತ ಸದಸ್ಯರಿಗೆ ಅವಕಾಶ ನೀಡದಿರುವುದು ಕ್ರೂರತನ ಮತ್ತು ಅಮಾನವೀಯ. ರೋಗಿಯು ಒಂಟಿತನ ಅನುಭವಿಸುತ್ತಿದ್ದಾಗ ಕುಟುಂಬದ ಸದಸ್ಯರು ಅಥವಾ ಆಪ್ತರನ್ನು ನೋಡದಿದ್ದರೆ ಚೇತರಿಕೆಗೊಳ್ಳುವ ಆಶಾಭಾವ ಕಳೆದುಕೊಳ್ಳುತ್ತಾನೆ’ ಎಂದು ವರ್ಧಾದಲ್ಲಿರುವ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಇಂದ್ರಜೀತ್ ಖಂಡೇಕರ್ ತಿಳಿಸಿದ್ದಾರೆ.