‘ಜಾರ್ಖಂಡ್ದ ಪಹರಿಯಾ ಪ್ರಾಚೀನ ಬುಡಕಟ್ಟು ಸಮುದಾಯಕ್ಕೆ ಸೇರಿದ ದೀಪಕ್, ಐದು ವರ್ಷದ ಬಾಲಕನಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಈ ಬಳಿಕ ತಾಯಿಯೂ ಅವನನ್ನು ತ್ಯಜಿಸಿದ್ದರು. ಆಗ ದೀಪಕ್ನ ಚಿಕ್ಕಮ್ಮ ಆತನನ್ನು ಉತ್ತರ ಪ್ರದೇಶದ ಹರ್ದೊರಿಗೆ ಕರೆದುಕೊಂಡಿದ್ದರು. ಆ ವೇಳೆ ದೀಪಕ್ ಮನೆಗೆ ಹೋಗಲೆಂದು ಚಿಕ್ಕಮ್ಮನ ಕೈತಪ್ಪಿಸಿ ಓಡಿಹೋಗಿದ್ದ. ಆದರೆ, ಜಾರ್ಖಂಡ್ ಬದಲು ಆತ ರಾಜಸ್ಥಾನದಬಿಕನೇರ್ಗೆ ಹೋಗುವ ರೈಲಿಗೆ ಹತ್ತಿದ್ದ’ ಎಂದು ಮಸಂಜೂರು ಪೊಲೀಸ್ ಠಾಣೆಯ ಅಧಿಕಾರಿ ಚಂದ್ರಶೇಖರ್ ದುಬೆ ತಿಳಿಸಿದರು.