<p><strong>ಡುಮ್ಕಾ:</strong> ಆತ ಐದು ವರ್ಷದ ಬಾಲಕನಾಗಿದ್ದಾಗ ಮನೆಯಿಂದ ದೂರವಾಗಿದ್ದ. 13 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈಗ ಮನೆ ಸೇರಿದ್ದಾನೆ.</p>.<p>ದೀಪಕ್ ದೆಹ್ರಿ(18)5 ವರ್ಷದ ಬಾಲಕನಾಗಿದ್ದಾಗ ತನ್ನ ಕುಟುಂದವರಿಂದ ಬೇರ್ಪಟ್ಟಿದ್ದ. ಆದರೆ ವಿಡಿಯೊ ಕರೆಯ ಸಹಾಯದಿಂದ ತನ್ನ ಗ್ರಾಮವನ್ನು ದೀಪ್ ಪತ್ತೆ ಮಾಡಿದ್ದಾನೆ.</p>.<p>‘ಜಾರ್ಖಂಡ್ದ ಪಹರಿಯಾ ಪ್ರಾಚೀನ ಬುಡಕಟ್ಟು ಸಮುದಾಯಕ್ಕೆ ಸೇರಿದ ದೀಪಕ್, ಐದು ವರ್ಷದ ಬಾಲಕನಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಈ ಬಳಿಕ ತಾಯಿಯೂ ಅವನನ್ನು ತ್ಯಜಿಸಿದ್ದರು. ಆಗ ದೀಪಕ್ನ ಚಿಕ್ಕಮ್ಮ ಆತನನ್ನು ಉತ್ತರ ಪ್ರದೇಶದ ಹರ್ದೊರಿಗೆ ಕರೆದುಕೊಂಡಿದ್ದರು. ಆ ವೇಳೆ ದೀಪಕ್ ಮನೆಗೆ ಹೋಗಲೆಂದು ಚಿಕ್ಕಮ್ಮನ ಕೈತಪ್ಪಿಸಿ ಓಡಿಹೋಗಿದ್ದ. ಆದರೆ, ಜಾರ್ಖಂಡ್ ಬದಲು ಆತ ರಾಜಸ್ಥಾನದಬಿಕನೇರ್ಗೆ ಹೋಗುವ ರೈಲಿಗೆ ಹತ್ತಿದ್ದ’ ಎಂದು ಮಸಂಜೂರು ಪೊಲೀಸ್ ಠಾಣೆಯ ಅಧಿಕಾರಿ ಚಂದ್ರಶೇಖರ್ ದುಬೆ ತಿಳಿಸಿದರು.</p>.<p>ಬಿಕಾನೇರ್ನ ಸಮಾಜ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿದೀಪಕ್ 13 ವರ್ಷಗಳನ್ನು ಕಳೆದಿದ್ದಾನೆ. ದೀಪಕ್ ಹಲವು ಬಾರಿ ಭಾವೋದ್ವೇಗಕ್ಕಾಗಿ ಒಳಗಾಗಿ ತನ್ನ ಬಾಲ್ಯದ ನೆನಪುಗಳನ್ನು ಹೇಳುತ್ತಿದ್ದ. ಜತೆಗೆ, ಗ್ರಾಮದ ವಿವರಗಳನ್ನು ನೀಡುತ್ತಿದ್ದ. ಈ ವಿವರಗಳ ಆಧಾರದ ಮೇಲೆ ಬಾಲಮಂದಿರದ ಅಧೀಕ್ಷಕ ಅರವಿಂದ್ ಆಚಾರ್ಯ ಅವರು, ಮಸಂಜೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೊ ಕರೆಯ ಮೂಲಕ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳನ್ನು ದೀಪಕ್ಗೆ ತೋರಿಸಿದ್ದಾರೆ. ಈ ವೇಳೆ ತನ್ನ ಮನೆ ಬಳಿಯಿದ್ದ ಮಸ್ಸಾಂಜೊರ್ ಅಣೆಕಟ್ಟನ್ನು ದೀಪಕ್ ಗುರುತಿಸಿದ್ದಾನೆ.</p>.<p>ಬಳಿಕ ದೀಪಕ್ನನ್ನು ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಕಾನೇರ್ ಪೊಲೀಸರು ದೀಪಕ್ನನ್ನು ಶುಕ್ರವಾರ ಆತನ ಕುಟುಂಬದವರಿಗೆ ಒಪ್ಪಿಸಿದರು.</p>.<p>‘ನನಗೆ ಅಪಾರ ಸಂತಸವಾಗಿದೆ. ನನ್ನ ಜನರ ನಡುವೆ ಬದುಕು ಸಾಗಿಸುತ್ತೇನೆ’ ಎಂದು ದೀಪಕ್ ಉತ್ಸಾಹದಿಂದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡುಮ್ಕಾ:</strong> ಆತ ಐದು ವರ್ಷದ ಬಾಲಕನಾಗಿದ್ದಾಗ ಮನೆಯಿಂದ ದೂರವಾಗಿದ್ದ. 13 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈಗ ಮನೆ ಸೇರಿದ್ದಾನೆ.</p>.<p>ದೀಪಕ್ ದೆಹ್ರಿ(18)5 ವರ್ಷದ ಬಾಲಕನಾಗಿದ್ದಾಗ ತನ್ನ ಕುಟುಂದವರಿಂದ ಬೇರ್ಪಟ್ಟಿದ್ದ. ಆದರೆ ವಿಡಿಯೊ ಕರೆಯ ಸಹಾಯದಿಂದ ತನ್ನ ಗ್ರಾಮವನ್ನು ದೀಪ್ ಪತ್ತೆ ಮಾಡಿದ್ದಾನೆ.</p>.<p>‘ಜಾರ್ಖಂಡ್ದ ಪಹರಿಯಾ ಪ್ರಾಚೀನ ಬುಡಕಟ್ಟು ಸಮುದಾಯಕ್ಕೆ ಸೇರಿದ ದೀಪಕ್, ಐದು ವರ್ಷದ ಬಾಲಕನಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡಿದ್ದ. ಈ ಬಳಿಕ ತಾಯಿಯೂ ಅವನನ್ನು ತ್ಯಜಿಸಿದ್ದರು. ಆಗ ದೀಪಕ್ನ ಚಿಕ್ಕಮ್ಮ ಆತನನ್ನು ಉತ್ತರ ಪ್ರದೇಶದ ಹರ್ದೊರಿಗೆ ಕರೆದುಕೊಂಡಿದ್ದರು. ಆ ವೇಳೆ ದೀಪಕ್ ಮನೆಗೆ ಹೋಗಲೆಂದು ಚಿಕ್ಕಮ್ಮನ ಕೈತಪ್ಪಿಸಿ ಓಡಿಹೋಗಿದ್ದ. ಆದರೆ, ಜಾರ್ಖಂಡ್ ಬದಲು ಆತ ರಾಜಸ್ಥಾನದಬಿಕನೇರ್ಗೆ ಹೋಗುವ ರೈಲಿಗೆ ಹತ್ತಿದ್ದ’ ಎಂದು ಮಸಂಜೂರು ಪೊಲೀಸ್ ಠಾಣೆಯ ಅಧಿಕಾರಿ ಚಂದ್ರಶೇಖರ್ ದುಬೆ ತಿಳಿಸಿದರು.</p>.<p>ಬಿಕಾನೇರ್ನ ಸಮಾಜ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿದೀಪಕ್ 13 ವರ್ಷಗಳನ್ನು ಕಳೆದಿದ್ದಾನೆ. ದೀಪಕ್ ಹಲವು ಬಾರಿ ಭಾವೋದ್ವೇಗಕ್ಕಾಗಿ ಒಳಗಾಗಿ ತನ್ನ ಬಾಲ್ಯದ ನೆನಪುಗಳನ್ನು ಹೇಳುತ್ತಿದ್ದ. ಜತೆಗೆ, ಗ್ರಾಮದ ವಿವರಗಳನ್ನು ನೀಡುತ್ತಿದ್ದ. ಈ ವಿವರಗಳ ಆಧಾರದ ಮೇಲೆ ಬಾಲಮಂದಿರದ ಅಧೀಕ್ಷಕ ಅರವಿಂದ್ ಆಚಾರ್ಯ ಅವರು, ಮಸಂಜೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೊ ಕರೆಯ ಮೂಲಕ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳನ್ನು ದೀಪಕ್ಗೆ ತೋರಿಸಿದ್ದಾರೆ. ಈ ವೇಳೆ ತನ್ನ ಮನೆ ಬಳಿಯಿದ್ದ ಮಸ್ಸಾಂಜೊರ್ ಅಣೆಕಟ್ಟನ್ನು ದೀಪಕ್ ಗುರುತಿಸಿದ್ದಾನೆ.</p>.<p>ಬಳಿಕ ದೀಪಕ್ನನ್ನು ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಕಾನೇರ್ ಪೊಲೀಸರು ದೀಪಕ್ನನ್ನು ಶುಕ್ರವಾರ ಆತನ ಕುಟುಂಬದವರಿಗೆ ಒಪ್ಪಿಸಿದರು.</p>.<p>‘ನನಗೆ ಅಪಾರ ಸಂತಸವಾಗಿದೆ. ನನ್ನ ಜನರ ನಡುವೆ ಬದುಕು ಸಾಗಿಸುತ್ತೇನೆ’ ಎಂದು ದೀಪಕ್ ಉತ್ಸಾಹದಿಂದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>