ಇತ್ತೀಚೆಗೆ, ಪಂಜಾಬ್ ಸಿಎಂ ಆಯ್ಕೆ ಕುರಿತಂತೆ ಮಾತನಾಡಿದ್ದ ಕಪಿಲ್ ಸಿಬಲ್ ಅವರು ಪಕ್ಷದಲ್ಲಿ ಪೂರ್ಣ ಪ್ರಮಾಣದ ಅಧ್ಯಕ್ಷರೇ ಇಲ್ಲದಿರುವಾಗ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದಿದ್ದರು. ಆ ಬಳಿಕ, ದೆಹಲಿಯ ಕಾಂಗ್ರೆಸ್ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಸಿಬಲ್ ನಿವಾಸದ ಬಳಿ ಗದ್ದಲ ಸೃಷ್ಟಿಸಿ ಪ್ರತಿಭಟನೆ ನಡೆಸಿದ್ದರು.