ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ವಿರುದ್ಧದ ಪ್ರಕರಣದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆಯನ್ನು ಪ್ರತಿನಿಧಿಸುವ ವಕೀಲ ವಿಕಾಸ್ ಸಿಂಗ್, 'ಕಂಗನಾ ರನೌತ್ ಅವರು ಸುಶಾಂತ್ ಅವರ ಸ್ನೇಹಿತೆ ಅಥವಾ ಪ್ರತಿನಿಧಿಯಲ್ಲ. ಅವರು ಸಾಮಾನ್ಯವಾಗಿರುವ ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ' ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆ ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆಮಾತನಾಡಿ, ಸುಶಾಂತ್ಗೆಕಂಗನಾಸ್ನೇಹಿತೆಯಲ್ಲ. ಅವರು ಮೂಲತಃ ಸಿನಿಮಾ ಮತ್ತು ಇತರ ಮಾಧ್ಯಮಗಳಲ್ಲಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ಆಕೆ ಎತ್ತಿರುವ ವಿಚಾರವು ಸರಿಯಾಗಿದೆ. ಆದರೆ ಆಕೆ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರತಿನಿಧಿಯಲ್ಲ ಮತ್ತು ಅವರ ಪ್ರಕರಣವನ್ನು ಮುಂದುವರಿಸುತ್ತಿಲ್ಲ. ಸುಶಾಂತ್ ಕೂಡ (ಸ್ವಜನಪಕ್ಷಪಾತದ) ಬಲಿಪಶುವಾಗಿರಬಹುದು, ಆದರೆ ಆಕೆ ಆತನನ್ನು ಪ್ರತಿನಿಧಿಸುತ್ತಿಲ್ಲ. ಆಕೆ ಸುಶಾಂತ್ಗಾಗಿ ಏನನ್ನೂ ಮಾಡುತ್ತಿಲ್ಲ. ಬದಲಿಗೆ ತನಗಾಗಿಯೇ ಆಕೆ ಇದನ್ನು ಮಾಡುತ್ತಿದ್ದಾಳೆ ಎಂದಿದ್ದಾರೆ.
ಇದಕ್ಕೂ ಮುನ್ನ ಪಿಂಕ್ವಿಲ್ಲಾದೊಂದಿಗೆ ನಡೆದಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಆಕೆಯು ತನ್ನದೇ ಆದ ಅಜೆಂಡಾವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಮತ್ತು ತನಗಿರುವ ವೈಯಕ್ತಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವ ಸಲುವಾಗಿ ಜನರ ಮೇಲೆ ಆಕ್ರಮಣ ಮಾಡುತ್ತಾಳೆ. ಆಕೆ ತನ್ನ ಸ್ವಕಾರ್ಯಗಳಲ್ಲಿದ್ದು, ಸುಶಾಂತ್ ಕುಟುಂಬದ ಎಫ್ಐಆರ್ಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
ಇಂಡಸ್ಟ್ರಿಯಲ್ಲಿ ಸ್ವಜನಪಕ್ಷಪಾತವಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಸುಶಾಂತ್ ಕೂಡ ತುಂಬ ತಾರತಮ್ಯವನ್ನು ಎದುರಿಸಿದ್ದಾರೆ. ಆದರೆ ಅದು ಈ ಸಂದರ್ಭದಲ್ಲಿ ತನಿಖೆಯ ಪ್ರಾಥಮಿಕ ವಿಚಾರವಾಗಲು ಸಾಧ್ಯವಿಲ್ಲ. ಬದಲಿಗೆ ಪ್ರಕರಣಕ್ಕೆ ಸಹಕಾರಿ ಅಂಶಗಳಾಗಿರಬಹುದು. ರಿಯಾ ಮತ್ತು ಅವಳ ಗ್ಯಾಂಗ್ ಸುಶಾಂತ್ ಅವರನ್ನು ಹೇಗೆ ಸಂಪೂರ್ಣವಾಗಿ ಶೋಷಿಸಲು ಮತ್ತು ಮುಗಿಸಲು ಪ್ರಯತ್ನಿಸಿತು ಎಂಬುದೇ ಪ್ರಕರಣದ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದ್ದರು.
ಈ ಮಧ್ಯೆ ಇತ್ತೀಚೆಗಷ್ಟೇ ಟ್ವಿಟರ್ನಲ್ಲಿಕಂಗನಾ, ವಿಕಾಸ್ ಸಿಂಗ್ ತನ್ನ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿರುವ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.'ಎಸ್ಎಸ್ಆರ್ ಅವರ ಕುಟುಂಬ ಮತ್ತು ಅವರ ವಕೀಲರು ಯಾವಾಗಲೂ ನನ್ನ ಹೋರಾಟಕ್ಕೆ ಬಹಳ ಬೆಂಬಲ ನೀಡುತ್ತಾರೆ' ಎಂದು ಬರೆದುಕೊಂಡಿದ್ದಾರೆ.
SSR’s family and their lawyer have always been very supportive of my struggle 🙏 https://t.co/jffCsVOqGl
— Kangana Ranaut (@KanganaTeam) August 21, 2020
ರಿಯಾ ವಿರುದ್ಧ ಪಾಟ್ನಾದಲ್ಲಿ ಕೆಕೆ ಸಿಂಗ್ ಎಫ್ಐಆರ್ ದಾಖಲಿಸಿದ್ದು, ಸುಶಾಂತ್ ಅವರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಆತನಿಗೆ ಹಣವನ್ನು ವಂಚಿಸಿರುವುದಾಗಿ ಆರೋಪಿಸಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರ ತನಿಖಾ ದಳವು (ಸಿಬಿಐ) ತನಿಖೆ ನಡೆಸುತ್ತಿದೆ. ಈ ಮಧ್ಯೆ ಜಾರಿ ನಿರ್ದೇಶನಾಲಯವು ಕೂಡ, ರಿಯಾ ಮತ್ತು ಅವಳ ಸಹೋದರ ಶೋಯಿಕ್ ಚಕ್ರವರ್ತಿ ವಿರುದ್ಧ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.