‘ಆಪರೇಷನ್ ವಿಜಯ’ ಯಶಸ್ಸಿನ ಸಂಕೇತವಾಗಿ ಉಧಂಪುರದ ಉತ್ತರ ಕಮಾಂಡ್, ಜಮ್ಮುವಿನ ಟೈಗರ್ ಡಿವಿಷನ್ ಮತ್ತು ರಜೌರಿ, ಪೂಂಚ್ ಮತ್ತು ದೋಡಾದಲ್ಲಿ ಆಚರಣೆ ಮಾಡಲಾಯಿತು. ಉತ್ತರ ಕಮಾಂಡ್ ಮುಖ್ಯಕಚೇರಿಯಲ್ಲಿರುವ ಯುದ್ಧಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸೇನಾ ಅಧಿಕಾರಿಗಳು, ಯೋಧರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.ಟೈಗರ್ ಡಿವಿಷನ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಂಖ್ಯಾತ ನಾಗರಿಕರು ಭಾಗವಹಿಸಿ ನಮನ ಸಲ್ಲಿಸಿದರು ಎಂದು ತಿಳಿಸಿದರು.