ಕೋಯಿಕ್ಕೋಡ್ನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ನಡ್ಡಾ, ’ಸಿಪಿಐ(ಎಂ) ನೇತೃತ್ವದ ಎಡರಂಗ (ಎಲ್ಡಿಎಫ್) ಸರ್ಕಾರವು ಸಮಾಜದ ಪ್ರತಿಯೊಂದು ವರ್ಗವನ್ನು ಸಮಾನವಾಗಿ ಪರಿಗಣಿಸುವುದಾಗಿ ಭಾವನೆಯನ್ನು ಬಿತ್ತುತ್ತದೆ. ಆದರೆ ಅವರ ನೀತಿ ಹುಸಿ ಜಾತ್ಯತೀತತೆ. ಸಮಾಜದ ಒಂದು ವರ್ಗಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡುವ ಸಲುವಾಗಿ ಇತರರನ್ನು ವಿಭಜಿಸಲು ಅದು ಪ್ರಯತ್ನಿಸುತ್ತದೆ’ ಎಂದು ಆರೋಪಿಸಿದ್ದಾರೆ.