<p><strong>ಲೇಹ್: </strong>ಲಡಾಖ್ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಜಾಲದ ಸುಧಾರಣೆ ಮತ್ತು ಮೇಲ್ದರ್ಜೆಗೇರಿಸುವ ಸಂಬಂಧ ಲಡಾಖ್ ಆಡಳಿತ ಮತ್ತು ಬಾರ್ಡರ್ ರೋಡ್ ಆರ್ಗನೈಜೇಷನ್(ಬಿಆರ್ಒ) ಐತಿಹಾಸಿಕ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>'ಈ ಯೋಜನೆ ಜೊತೆಗೆ, ಗುಡ್ಡಗಾಡು ಪ್ರದೇಶಗಳಲ್ಲಿ ಸುರಂಗಗಳು ಮತ್ತು ರಸ್ತೆಗಳನ್ನು ನಿರ್ಮಿಸುವಲ್ಲಿರುವ ಬಿಆರ್ಒ ಸಂಸ್ಥೆಯ ಪರಿಣತಿ ಹೊಂದಿದೆ. ಇದನ್ನು ಪರಿಗಣಿಸಿ ಒಟ್ಟು ಏಳು ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಬಿಆರ್ಒಗೆ ವಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಈ ಉಪಕ್ರಮದಿಂದ ದೀರ್ಘಾವಧಿಯಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>‘ಪ್ರಾಜೆಕ್ಟ್ ಹಿಮಂಕ್’ನ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಅರವಿಂದ್ ಸಿಂಗ್, ‘ಪ್ರಾಜೆಕ್ಟ್ ವಿಜಯಕ್‘ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಆಶಿಷ್ ಗಂಭೀರ್ ಮತ್ತು ಲಡಾಖ್ನ ರಸ್ತೆ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪಿ.ಸಿ. ತನೋಚ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.</p>.<p>ಲಡಾಖ್ನಲ್ಲಿ ರಸ್ತೆ ಹಾಗೂ ಸೇತುವೆಗಳು ಸೇರಿದಂತೆ ಸಂಪರ್ಕ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಿಆರ್ಒ, ‘ಪ್ರಾಜೆಕ್ಟ್ ಹಿಮಂಕ್’ ಹಾಗೂ ‘ಪ್ರಾಜೆಕ್ಟ್ ವಿಜಯಕ್‘ ಹೆಸರಿನ ಯೋಜನೆಗಳನ್ನು ರೂಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೇಹ್: </strong>ಲಡಾಖ್ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆ ಸಂಪರ್ಕ ಜಾಲದ ಸುಧಾರಣೆ ಮತ್ತು ಮೇಲ್ದರ್ಜೆಗೇರಿಸುವ ಸಂಬಂಧ ಲಡಾಖ್ ಆಡಳಿತ ಮತ್ತು ಬಾರ್ಡರ್ ರೋಡ್ ಆರ್ಗನೈಜೇಷನ್(ಬಿಆರ್ಒ) ಐತಿಹಾಸಿಕ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>'ಈ ಯೋಜನೆ ಜೊತೆಗೆ, ಗುಡ್ಡಗಾಡು ಪ್ರದೇಶಗಳಲ್ಲಿ ಸುರಂಗಗಳು ಮತ್ತು ರಸ್ತೆಗಳನ್ನು ನಿರ್ಮಿಸುವಲ್ಲಿರುವ ಬಿಆರ್ಒ ಸಂಸ್ಥೆಯ ಪರಿಣತಿ ಹೊಂದಿದೆ. ಇದನ್ನು ಪರಿಗಣಿಸಿ ಒಟ್ಟು ಏಳು ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಬಿಆರ್ಒಗೆ ವಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಈ ಉಪಕ್ರಮದಿಂದ ದೀರ್ಘಾವಧಿಯಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>‘ಪ್ರಾಜೆಕ್ಟ್ ಹಿಮಂಕ್’ನ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಅರವಿಂದ್ ಸಿಂಗ್, ‘ಪ್ರಾಜೆಕ್ಟ್ ವಿಜಯಕ್‘ ಮುಖ್ಯ ಎಂಜಿನಿಯರ್ ಬ್ರಿಗೇಡಿಯರ್ ಆಶಿಷ್ ಗಂಭೀರ್ ಮತ್ತು ಲಡಾಖ್ನ ರಸ್ತೆ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪಿ.ಸಿ. ತನೋಚ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.</p>.<p>ಲಡಾಖ್ನಲ್ಲಿ ರಸ್ತೆ ಹಾಗೂ ಸೇತುವೆಗಳು ಸೇರಿದಂತೆ ಸಂಪರ್ಕ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಿಆರ್ಒ, ‘ಪ್ರಾಜೆಕ್ಟ್ ಹಿಮಂಕ್’ ಹಾಗೂ ‘ಪ್ರಾಜೆಕ್ಟ್ ವಿಜಯಕ್‘ ಹೆಸರಿನ ಯೋಜನೆಗಳನ್ನು ರೂಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>