ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ‘ಬ್ರಿಟಷರೇ ಭಾರತ ಬಿಟ್ಟು ತೊಲಗಿ‘ ಚಳವಳಿಯನ್ನು 1942ರಲ್ಲಿ ಆರಂಭಿಸಲಾಯಿತು. ಈ ಆಂದೋಲನದ ಐದು ವರ್ಷಗಳ ನಂತರ (ಆಗಸ್ಟ್ 15, 1947) ಭಾರತ, ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆಯಿತು. ಈ ಚಳುವಳಿಯು ವಸಾಹತುಶಾಹಿ ವಿರುದ್ಧದ ಹೋರಾಟವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.