ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸೀನ್‌ ಮಲ್ಲಿಕ್‌ಗೆ ಶಿಕ್ಷೆ: ಶಾಂತಿಯ ಪ್ರಯತ್ನಕ್ಕೆ ಆದ ಹಿನ್ನಡೆ- ಪಿಎಜಿಡಿ

Last Updated 25 ಮೇ 2022, 15:18 IST
ಅಕ್ಷರ ಗಾತ್ರ

ಶ್ರೀನಗರ: ‘ದೆಹಲಿ ಎನ್‌ಐಎ ನ್ಯಾಯಾಲಯವು ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸೀನ್‌ ಮಲ್ಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ದುರದುಷ್ಟಕರ ಹಾಗೂ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ಆದ ಹಿನ್ನಡೆ’ ಎಂದು ಗುಪ್ಕಾರ್‌ ಕೂಟ(ಪಿಎಜಿಡಿ) ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಪಿಎಜಿಡಿ ವಕ್ತಾರ ಮೊಹಮ್ಮದ್‌ ಯುಸುಫ್‌ ತರಿಗಾಮಿ, ‘ ಎನ್ಐಎ ಕೋರ್ಟ್ ತನ್ನ ತೀರ್ಪು ನೀಡಿದೆ ಆದರೆ ನ್ಯಾಯ ನೀಡಿಲ್ಲ.

ನ್ಯಾಯಾಲಯದ ತೀರ್ಪು ಪರಕೀಯತೆ ಮತ್ತು ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುತ್ತಿದೆ. ಅಲ್ಲದೇ ಈ ಪ್ರದೇಶದಲ್ಲಿ ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT