ಶ್ರೀನಗರ: ‘ದೆಹಲಿ ಎನ್ಐಎ ನ್ಯಾಯಾಲಯವು ಜೆಕೆಎಲ್ಎಫ್ ಮುಖ್ಯಸ್ಥ ಯಾಸೀನ್ ಮಲ್ಲಿಕ್ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ದುರದುಷ್ಟಕರ ಹಾಗೂ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ಆದ ಹಿನ್ನಡೆ’ ಎಂದು ಗುಪ್ಕಾರ್ ಕೂಟ(ಪಿಎಜಿಡಿ) ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಪಿಎಜಿಡಿ ವಕ್ತಾರ ಮೊಹಮ್ಮದ್ ಯುಸುಫ್ ತರಿಗಾಮಿ, ‘ ಎನ್ಐಎ ಕೋರ್ಟ್ ತನ್ನ ತೀರ್ಪು ನೀಡಿದೆ ಆದರೆ ನ್ಯಾಯ ನೀಡಿಲ್ಲ.
ನ್ಯಾಯಾಲಯದ ತೀರ್ಪು ಪರಕೀಯತೆ ಮತ್ತು ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುತ್ತಿದೆ. ಅಲ್ಲದೇ ಈ ಪ್ರದೇಶದಲ್ಲಿ ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ’ ಎಂದು ಹೇಳಿದ್ದಾರೆ.