<p><strong>ಮುಂಬೈ</strong>: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಮತ್ತು ಅವರ ಕುಟುಂಬ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಈ ಹಿಂದೆ ಉತ್ತರ ಪ್ರದೇಶ ರಾಜ್ಯಪಾಲರಾಗಿದ್ದ ರಾಮ್ ನಾಯಕ್ ಅವರಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಕಡಿತಗೊಳಿಸಿದೆ.</p>.<p>ಮಹಾರಾಷ್ಟ್ರ ಬಿಜೆಪಿಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಸರ್ಕಾರವು ಇದೇ 8ರಂದು ಆದೇಶ ಹೊರಡಿಸಿದೆ.</p>.<p>ಫಡಣವೀಸ್ಗೆ ಈಗ ಬೆಂಗಾವಲು ಪಡೆಯನ್ನೊಳಗೊಂಡ ‘ವೈ–ಪ್ಲಸ್’ ಭದ್ರತೆ ಒದಗಿಸಲಾಗಿದೆ. ಈ ಮೊದಲು ಅವರಿಗೆ ‘ಜೆಡ್–ಪ್ಲಸ್’ ಭದ್ರತೆ ನೀಡಲಾಗಿತ್ತು. ಪತ್ನಿ ಅಮೃತ ಹಾಗೂ ಮಗಳು ದಿವಿಜಾ ಅವರ ಭದ್ರತೆಯನ್ನು ‘ವೈ–ಪ್ಲಸ್’ನಿಂದ ‘ಎಕ್ಸ್’ ಕೆಟಗರಿಗೆ ತಗ್ಗಿಸಲಾಗಿದೆ.</p>.<p>ರಾಮ್ ನಾಯಕ್ ಅವರಿಗೆ ‘ವೈ–ಪ್ಲಸ್’ ಬದಲಾಗಿ ‘ವೈ’ ಭದ್ರತೆ ಒದಗಿಸಲಾಗಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರ ಭದ್ರತೆಯನ್ನು ‘ವೈ–ಪ್ಲಸ್’ಗೆ ಇಳಿಸಲಾಗಿದೆ. ಅವರಿಗೆ ಬೆಂಗಾವಲು ಪಡೆಯೂ ಇರಲಿದೆ. ಈ ಮೊದಲು ಠಾಕ್ರೆ ‘ಜೆಡ್’ ಭದ್ರತೆ ಹೊಂದಿದ್ದರು. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಭದ್ರತೆಯನ್ನು ‘ವೈ–ಪ್ಲಸ್’ಗೆ ಇಳಿಸಲಾಗಿದೆ.</p>.<p>ಬಿಜೆಪಿ ಮುಖಂಡ ಹಾಗೂ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ, ಕೇಂದ್ರ ಸಚಿವ ರಾವ್ ಸಾಹೇಬ್ ಧಾನ್ವೆ ಅವರಿಗೆ ನೀಡಿದ್ದ ಭದ್ರತೆಯನ್ನೂ ಸಂಪೂರ್ಣವಾಗಿ ಹಿಂಪಡೆಯಲಾಗಿದೆ.</p>.<p>ಕಾಂಗ್ರೆಸ್ ಮುಖಂಡ ಹಾಗೂ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರೀಗ ಬೆಂಗಾವಲು ಪಡೆಯನ್ನೊಳಗೊಂಡ ‘ವೈ–ಪ್ಲಸ್ ಭದ್ರತೆ ಪಡೆಯಲಿದ್ದಾರೆ. ಈ ಮೊದಲು ಅವರಿಗೆ ಕೇವಲ ‘ವೈ–ಪ್ಲಸ್’ ಭದ್ರತೆ ಇತ್ತು. ಹಿರಿಯ ವಕೀಲ ಉಜ್ವಲ್ ನಿಕಂ ಅವರ ಭದ್ರತೆಯನ್ನು ‘ಜೆಡ್’ಗೆ ಹೆಚ್ಚಿಸಲಾಗಿದೆ.</p>.<p>ಉಪ ಮುಖ್ಯಮಂತ್ರಿ ಸುನೇತ್ರ ಪವಾರ್ ಹಾಗೂ ಯುವ ಸೇನೆಯ ಕಾರ್ಯದರ್ಶಿ ವರುಣ್ ಸರ್ದೇಸಾಯಿ ಸೇರಿದಂತೆ ಒಟ್ಟು 13 ಮಂದಿಗೆ ಹೊಸದಾಗಿ ಭದ್ರತೆ ಒದಗಿಸಲಾಗಿದೆ. ವರುಣ್ ಅವರು ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಅವರ ಸಹೋದರ ಸಂಬಂಧಿ.</p>.<p>***<br />ನಾನು ರಾಜ್ಯದ ಜನರ ಆಸ್ತಿ. ಸರ್ಕಾರದ ಇಂತಹ ಕ್ರಮಗಳಿಂದ ಧೃತಿಗೆಡುವುದಿಲ್ಲ. ಮುಂದೆಯೂ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ.<br /><em><strong>-ದೇವೇಂದ್ರ ಫಡಣವೀಸ್, ವಿರೋಧ ಪಕ್ಷದ ನಾಯಕ.</strong></em></p>.<p><em><strong>***</strong></em></p>.<p>ರಾಜಕೀಯ ನಾಯಕರು ಹಾಗೂ ಗಣ್ಯರ ಭದ್ರತೆಯ ಪರಿಶೀಲನೆಗೆ ರಚಿಸಲಾಗಿದ್ದ ಹಿರಿಯ ಅಧಿಕಾರಿಗಳ ತಂಡ ಈ ತೀರ್ಮಾನ ಕೈಗೊಂಡಿದೆ. ಇದರಲ್ಲಿ ರಾಜಕೀಯ ದುರುದ್ದೇಶವಿಲ್ಲ.<br /><em><strong>–ಅನಿಲ್ ದೇಶ್ಮುಖ್, ಗೃಹ ಸಚಿವ</strong></em></p>.<p><b><i>**</i></b></p>.<p>ಉಗ್ರರಿಂದ ನನಗೆ ಬೆದರಿಕೆ ಇತ್ತು. ಹೀಗಾಗಿ ಭದ್ರತೆ ಒದಗಿಸಲಾಗಿತ್ತು. ಅದನ್ನು ಸರ್ಕಾರ ಹಿಂಪಡೆದಿದೆ. ನನ್ನ ಪ್ರಾಣಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ.<br />-<em><strong>ನಾರಾಯಣ ರಾಣೆ, ಬಿಜೆಪಿ ಮುಖಂಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಮತ್ತು ಅವರ ಕುಟುಂಬ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಈ ಹಿಂದೆ ಉತ್ತರ ಪ್ರದೇಶ ರಾಜ್ಯಪಾಲರಾಗಿದ್ದ ರಾಮ್ ನಾಯಕ್ ಅವರಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಕಡಿತಗೊಳಿಸಿದೆ.</p>.<p>ಮಹಾರಾಷ್ಟ್ರ ಬಿಜೆಪಿಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಸರ್ಕಾರವು ಇದೇ 8ರಂದು ಆದೇಶ ಹೊರಡಿಸಿದೆ.</p>.<p>ಫಡಣವೀಸ್ಗೆ ಈಗ ಬೆಂಗಾವಲು ಪಡೆಯನ್ನೊಳಗೊಂಡ ‘ವೈ–ಪ್ಲಸ್’ ಭದ್ರತೆ ಒದಗಿಸಲಾಗಿದೆ. ಈ ಮೊದಲು ಅವರಿಗೆ ‘ಜೆಡ್–ಪ್ಲಸ್’ ಭದ್ರತೆ ನೀಡಲಾಗಿತ್ತು. ಪತ್ನಿ ಅಮೃತ ಹಾಗೂ ಮಗಳು ದಿವಿಜಾ ಅವರ ಭದ್ರತೆಯನ್ನು ‘ವೈ–ಪ್ಲಸ್’ನಿಂದ ‘ಎಕ್ಸ್’ ಕೆಟಗರಿಗೆ ತಗ್ಗಿಸಲಾಗಿದೆ.</p>.<p>ರಾಮ್ ನಾಯಕ್ ಅವರಿಗೆ ‘ವೈ–ಪ್ಲಸ್’ ಬದಲಾಗಿ ‘ವೈ’ ಭದ್ರತೆ ಒದಗಿಸಲಾಗಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರ ಭದ್ರತೆಯನ್ನು ‘ವೈ–ಪ್ಲಸ್’ಗೆ ಇಳಿಸಲಾಗಿದೆ. ಅವರಿಗೆ ಬೆಂಗಾವಲು ಪಡೆಯೂ ಇರಲಿದೆ. ಈ ಮೊದಲು ಠಾಕ್ರೆ ‘ಜೆಡ್’ ಭದ್ರತೆ ಹೊಂದಿದ್ದರು. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಭದ್ರತೆಯನ್ನು ‘ವೈ–ಪ್ಲಸ್’ಗೆ ಇಳಿಸಲಾಗಿದೆ.</p>.<p>ಬಿಜೆಪಿ ಮುಖಂಡ ಹಾಗೂ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ, ಕೇಂದ್ರ ಸಚಿವ ರಾವ್ ಸಾಹೇಬ್ ಧಾನ್ವೆ ಅವರಿಗೆ ನೀಡಿದ್ದ ಭದ್ರತೆಯನ್ನೂ ಸಂಪೂರ್ಣವಾಗಿ ಹಿಂಪಡೆಯಲಾಗಿದೆ.</p>.<p>ಕಾಂಗ್ರೆಸ್ ಮುಖಂಡ ಹಾಗೂ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರೀಗ ಬೆಂಗಾವಲು ಪಡೆಯನ್ನೊಳಗೊಂಡ ‘ವೈ–ಪ್ಲಸ್ ಭದ್ರತೆ ಪಡೆಯಲಿದ್ದಾರೆ. ಈ ಮೊದಲು ಅವರಿಗೆ ಕೇವಲ ‘ವೈ–ಪ್ಲಸ್’ ಭದ್ರತೆ ಇತ್ತು. ಹಿರಿಯ ವಕೀಲ ಉಜ್ವಲ್ ನಿಕಂ ಅವರ ಭದ್ರತೆಯನ್ನು ‘ಜೆಡ್’ಗೆ ಹೆಚ್ಚಿಸಲಾಗಿದೆ.</p>.<p>ಉಪ ಮುಖ್ಯಮಂತ್ರಿ ಸುನೇತ್ರ ಪವಾರ್ ಹಾಗೂ ಯುವ ಸೇನೆಯ ಕಾರ್ಯದರ್ಶಿ ವರುಣ್ ಸರ್ದೇಸಾಯಿ ಸೇರಿದಂತೆ ಒಟ್ಟು 13 ಮಂದಿಗೆ ಹೊಸದಾಗಿ ಭದ್ರತೆ ಒದಗಿಸಲಾಗಿದೆ. ವರುಣ್ ಅವರು ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಅವರ ಸಹೋದರ ಸಂಬಂಧಿ.</p>.<p>***<br />ನಾನು ರಾಜ್ಯದ ಜನರ ಆಸ್ತಿ. ಸರ್ಕಾರದ ಇಂತಹ ಕ್ರಮಗಳಿಂದ ಧೃತಿಗೆಡುವುದಿಲ್ಲ. ಮುಂದೆಯೂ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ.<br /><em><strong>-ದೇವೇಂದ್ರ ಫಡಣವೀಸ್, ವಿರೋಧ ಪಕ್ಷದ ನಾಯಕ.</strong></em></p>.<p><em><strong>***</strong></em></p>.<p>ರಾಜಕೀಯ ನಾಯಕರು ಹಾಗೂ ಗಣ್ಯರ ಭದ್ರತೆಯ ಪರಿಶೀಲನೆಗೆ ರಚಿಸಲಾಗಿದ್ದ ಹಿರಿಯ ಅಧಿಕಾರಿಗಳ ತಂಡ ಈ ತೀರ್ಮಾನ ಕೈಗೊಂಡಿದೆ. ಇದರಲ್ಲಿ ರಾಜಕೀಯ ದುರುದ್ದೇಶವಿಲ್ಲ.<br /><em><strong>–ಅನಿಲ್ ದೇಶ್ಮುಖ್, ಗೃಹ ಸಚಿವ</strong></em></p>.<p><b><i>**</i></b></p>.<p>ಉಗ್ರರಿಂದ ನನಗೆ ಬೆದರಿಕೆ ಇತ್ತು. ಹೀಗಾಗಿ ಭದ್ರತೆ ಒದಗಿಸಲಾಗಿತ್ತು. ಅದನ್ನು ಸರ್ಕಾರ ಹಿಂಪಡೆದಿದೆ. ನನ್ನ ಪ್ರಾಣಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ.<br />-<em><strong>ನಾರಾಯಣ ರಾಣೆ, ಬಿಜೆಪಿ ಮುಖಂಡ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>