ನಾಗಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ದುರ್ಗಾಪುರ ಪ್ರದೇಶದಲ್ಲಿ ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ನರೇಶ್ ಸೋನಾವಾನೆ(40) ಮೃತಪಟ್ಟವರು.ಪೂರ್ವ ಮಹಾರಾಷ್ಟ್ರದ ದುರ್ಗಾಪುರದ ಗಣಿ ಪ್ರದೇಶದ ಬಳಿ ಸೋಮವಾರ ಮಧ್ಯರಾತ್ರಿಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.