‘ದಿ ಎಲಿಫೆಂಟ್ ವಿಸ್ಪರರ್ಸ್’ ಹಾಗೂ ಆರ್ಆರ್ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಆದರೆ, ನನ್ನ ಏಕೈಕ ವಿನಂತಿಯೆಂದರೆ, ‘ಆಸ್ಕರ್’ ವಿಚಾರವಾಗಿ ಆಡಳಿತ ಪಕ್ಷದವರು (ಬಿಜೆಪಿ) ಕ್ರೆಡಿಟ್ ತೆಗೆದುಕೊಳ್ಳಬಾರದು. ನಾವು ನಿರ್ದೇಶನ ಮಾಡಿದ್ದೇವೆ, ನಾವು ಬರೆದಿದ್ದೇವೆ, ಮೋದಿ ಅವರು ನಿರ್ದೇಶನ ಮಾಡಿದ್ದರು ಎಂದು ಹೇಳಿಕೊಳ್ಳಬಾರದು’ ಎಂದು ಖರ್ಗೆ ಹೇಳಿದರು. ಖರ್ಗೆ ಮಾತಿಗೆ ಇಡೀ ಸಂಸತ್ ಕ್ಷಣಕಾಲ ನಗೆಗಡಲಲ್ಲಿ ತೇಲಿತು.