<p><strong>ತಿರುವನಂತಪುರ:</strong> ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ₹52.7 ಲಕ್ಷ ಪರಿಹಾರಧನವನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಘೋಷಿಸಿದೆ.</p>.<p>ಮಲಪ್ಪುರಂನ ಮನಿಯೂರ್ ಗ್ರಾಮದ ನಿವಾಸಿ ಬಿಜು(29) ಅವರಿಗೆ 2016 ರ ಜುಲೈ ತಿಂಗಳಲ್ಲಿ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಸೊಂಟದ ಕೆಳಕಿನ ಭಾಗ ಪಾರ್ಶ್ವವಾಯುಗೆ ತುತ್ತಾಗಿ ದುರ್ಬಲಗೊಂಡಿದೆ. ಬಿಜು ವಿವಾಹವಾದ ಏಳು ತಿಂಗಳಿನ ಬಳಿಕ ಈ ಅಪಘಾತ ಸಂಭವಿಸಿತ್ತು.</p>.<p>ಫುಟ್ಬಾಲ್ ಆಟಗಾರರೂ ಆಗಿದ್ದ ಬಿಜು ಅವರು ಮೈಸೂರಿನಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದರು. ನಂತರ ವಿದೇಶಕ್ಕೆ ತೆರಳುವ ಕನಸು ಹೊತ್ತು ಕೆಲಸ ಬಿಟ್ಟಿದ್ದರು.</p>.<p>ಎಂಎಸಿಟಿಯು ಬಿಜು ಅವರಿಗೆ ಬಡ್ಡಿ ಸೇರಿ ₹68 ಲಕ್ಷ ಪರಿಹಾರಧನ ಘೋಷಿಸಿದೆ ಎಂದು ಬಿಜು ಪರ ವಕೀಲರಾದ ಬಿ.ಎಂ ಸಬೀನಾ ಮತ್ತು ಕೆ.ಪಿ ಅನಿಲ್ ಕುಮಾರ್ ಅವರು ತಿಳಿಸಿದರು.</p>.<p>‘ಬಿಜು ಅವರು ದೇಹದ ಶೇ.80 ರಷ್ಟು ಭಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾಮಾನ್ಯ ಕೆಲಸ ಮಾಡಲು ಬೇರೆ ವ್ಯಕ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಬಿಜು ಅವರ ವಯಸ್ಸು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರಧನ ನೀಡಲಾಗಿದೆ. ಆದೇಶದ ಪೂರ್ತಿ ವಿವರ ಲಭ್ಯವಾದ ಬಳಿಕ ಪರಿಹಾರಧನ ಪಾವತಿಸುವ ವಿಧಾನ ತಿಳಿಯಲಿದೆ’ ಎಂದು ಅವರು ಹೇಳಿದರು.</p>.<p>‘ಪರಿಹಾರಧನ ಸ್ವಲ್ಪ ಸಮಾಧಾನವನ್ನು ನೀಡಿದೆ. ನಾನು ವೀಲ್ ಚೇರ್ ಮತ್ತು ಹಾಸಿಗೆಗಷ್ಟೇ ಸೀಮಿತವಾಗಿದ್ದೇನೆ. ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಬಿಜು ಹೇಳಿದರು. ಈಗಾಗಲೇ ಬಿಜು ಅವರ ಚಿಕಿತ್ಸೆಗೆ ₹4 ಲಕ್ಷ ಖರ್ಚಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ₹52.7 ಲಕ್ಷ ಪರಿಹಾರಧನವನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಘೋಷಿಸಿದೆ.</p>.<p>ಮಲಪ್ಪುರಂನ ಮನಿಯೂರ್ ಗ್ರಾಮದ ನಿವಾಸಿ ಬಿಜು(29) ಅವರಿಗೆ 2016 ರ ಜುಲೈ ತಿಂಗಳಲ್ಲಿ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಸೊಂಟದ ಕೆಳಕಿನ ಭಾಗ ಪಾರ್ಶ್ವವಾಯುಗೆ ತುತ್ತಾಗಿ ದುರ್ಬಲಗೊಂಡಿದೆ. ಬಿಜು ವಿವಾಹವಾದ ಏಳು ತಿಂಗಳಿನ ಬಳಿಕ ಈ ಅಪಘಾತ ಸಂಭವಿಸಿತ್ತು.</p>.<p>ಫುಟ್ಬಾಲ್ ಆಟಗಾರರೂ ಆಗಿದ್ದ ಬಿಜು ಅವರು ಮೈಸೂರಿನಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದರು. ನಂತರ ವಿದೇಶಕ್ಕೆ ತೆರಳುವ ಕನಸು ಹೊತ್ತು ಕೆಲಸ ಬಿಟ್ಟಿದ್ದರು.</p>.<p>ಎಂಎಸಿಟಿಯು ಬಿಜು ಅವರಿಗೆ ಬಡ್ಡಿ ಸೇರಿ ₹68 ಲಕ್ಷ ಪರಿಹಾರಧನ ಘೋಷಿಸಿದೆ ಎಂದು ಬಿಜು ಪರ ವಕೀಲರಾದ ಬಿ.ಎಂ ಸಬೀನಾ ಮತ್ತು ಕೆ.ಪಿ ಅನಿಲ್ ಕುಮಾರ್ ಅವರು ತಿಳಿಸಿದರು.</p>.<p>‘ಬಿಜು ಅವರು ದೇಹದ ಶೇ.80 ರಷ್ಟು ಭಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾಮಾನ್ಯ ಕೆಲಸ ಮಾಡಲು ಬೇರೆ ವ್ಯಕ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಬಿಜು ಅವರ ವಯಸ್ಸು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರಧನ ನೀಡಲಾಗಿದೆ. ಆದೇಶದ ಪೂರ್ತಿ ವಿವರ ಲಭ್ಯವಾದ ಬಳಿಕ ಪರಿಹಾರಧನ ಪಾವತಿಸುವ ವಿಧಾನ ತಿಳಿಯಲಿದೆ’ ಎಂದು ಅವರು ಹೇಳಿದರು.</p>.<p>‘ಪರಿಹಾರಧನ ಸ್ವಲ್ಪ ಸಮಾಧಾನವನ್ನು ನೀಡಿದೆ. ನಾನು ವೀಲ್ ಚೇರ್ ಮತ್ತು ಹಾಸಿಗೆಗಷ್ಟೇ ಸೀಮಿತವಾಗಿದ್ದೇನೆ. ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಬಿಜು ಹೇಳಿದರು. ಈಗಾಗಲೇ ಬಿಜು ಅವರ ಚಿಕಿತ್ಸೆಗೆ ₹4 ಲಕ್ಷ ಖರ್ಚಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>