‘ಎಎಪಿ (ಆಮ್ ಆದ್ಮಿ ಪಕ್ಷ) ತೊರೆದು ಬಿಜೆಪಿ ಸೇರಿ. ನಿಮ್ಮ ವಿರುದ್ಧ ಸಿಬಿಐ ಹಾಗೂ ಇ.ಡಿ ದಾಖಲಿಸಿಕೊಂಡಿರುವ ಎಲ್ಲ ಪ್ರಕರಣಗಳನ್ನು ಮುಚ್ಚಿಹಾಕುವ ಬಗ್ಗೆ ನಾವು ಭರವಸೆ ನೀಡುತ್ತೇವೆ ಎಂದು ಬಿಜೆಪಿಯಿಂದ ಸಂದೇಶ ಬಂದಿತ್ತು. ನಾನು ಮಹಾರಾಣಾ ಪ್ರತಾಪ್ನ ವಂಶಸ್ಥ, ನಾನು ರಜಪೂತ. ತಲೆಯನ್ನು ಕತ್ತರಿಸಿ ಹಾಕಿದರೂ ಭ್ರಷ್ಟರು ಮತ್ತು ಪಿತೂರಿಗಾರರ ಜತೆ ಸೇರುವುದಿಲ್ಲ. ನನ್ನ ವಿರುದ್ಧದ ಪ್ರಕರಣಗಳೆಲ್ಲವೂ ಸುಳ್ಳು. ಏನು ಬೇಕಾದರೂ ಮಾಡಿಕೊಳ್ಳಿ ಎಂಬುದಾಗಿ ಬಿಜೆಪಿ ಸಂದೇಶಕ್ಕೆ ಉತ್ತರಿಸಿದ್ದೇನೆ’ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.